ಕೋಕಾ ಕಾಯ್ದೆ ಜಾರಿಗೆ ಸಚಿವ ಸಂಪುಟ ಒಪ್ಪಿಗೆ

ಭಯೋತ್ಪಾದನೆ ಕುರಿತು ಸರಕಾರ ಬಿಗಿ ನಿಲುವು ತೆಗೆದುಕೊಂಡಿದ್ದು, ಕೋಕಾ ಕಾಯ್ದೆ ಜಾರಿಗೆಗೊಳಿಸಲು ಅನೇಕ ದಿನಗಳ ಪ್ರಯತ್ನದ ಫಲ ಇಂದು ದೊರೆತಿದೆ. ಸಂಘಟಿತ ಭಯೋತ್ಪಾದನೆ ಕೃತ್ಯದಲ್ಲಿ ಪಾಲ್ಗೊಳ್ಳವವರ ವಿರುದ್ಧ ಕಠಣ ಕ್ರಮಗಳನ್ನು ಕೈಗೊಳ್ಳಲಾಗುವುದು. ನೂತನವಾಗಿ ತಿದ್ದುಪಡಿಯಾದ ಕಾಯ್ದೆಯಲ್ಲಿ ದಂಡದ ಮೊತ್ತವನ್ನು 1 ಲಕ್ಷ ರುಪಾಯಿಯಿಂದ 10 ಲಕ್ಷ ರುಪಾಯಿಗೆ ಏರಿಸಲು ಹಾಗೂ ಆರೋಪಿ ಸ್ಥಿರಾಸ್ತಿ ಮುಟ್ಟುಗೋಲು ಹಾಕಲು ಮತ್ತು ಆರೋಪ ಪಟ್ಟಿ ಸಲ್ಲಿಸುವ ಅವಧಿಯನ್ನು 100 ದಿನಗಳಿಂದ 365 ದಿನಗಳಿಗೆ ವಿಸ್ತರಿಸಲು ಸಂಪುಟ ಅನುಮತಿ ನೀಡಿದೆ ಎಂದು ಅವರು ವಿವರಿಸಿದರು.
ಕೋಕಾ ಕಾಯ್ದೆ ಜಾರಿ ಮೂಲಕ ರಾಜ್ಯದಲ್ಲಿ ಭಯೋತ್ಪಾದನೆ ಕೃತ್ಯವನ್ನು ತಡೆಯಬಹುದು ಎಂದ ಶೋಭಾ ಕರಂದ್ಲಾಜೆ, ಕಳೆದ ವರ್ಷ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿಯೇ ಈ ಕಾಯ್ದೆ ಜಾರಿಗೆ ತರುವ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ ಎಂದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಸಂಬಂಧಿಸಿದಂತೆ ಮಾತನಾಡಿದ ಅವರು, ಜುಲೈ ಅಂತ್ಯದೊಳಗೆ ಚುನಾವಣೆ ಮುಗಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚುನಾವಣೆಗೆ ಬೇಕಿರುವ ಮತಯಂತ್ರ ಹಾಗೂ ಮತ್ತಿತರ ಸಿದ್ಧತೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಸಂಸ್ಕೃತಿ ಮತ್ತು ವೇದಿಕ್ ಸಂಶೋಧನಾ ವಿಶ್ವವಿದ್ಯಾಲಯ ಹಾಗೂ ಮೈಸೂರಿನಲ್ಲಿ ಸಂಗೀತ ಹಾಗೂ ಕಲಾ ವಿಶ್ವವಿದ್ಯಾಲಯ ಸ್ಥಾಪನೆ. ವಿಜಯನಗರ ರಾಜ್ಯದ ಒಡೆಯರಾಗಿದ್ದ ಶ್ರೀಕೃಷ್ಣದೇವರಾಯ ಒಡೆಯರ 500 ವರ್ಷಗಳ ಇತಿಹಾಸ ಆಚರಿಸಲು ಸರ್ಕಾರ ಶೀಘ್ರದಲ್ಲಿ ನೂತನ ಸಮಿತಿ ರಚಿಸಲಾಗುವುದು. ಈ ಹಿನ್ನೆಲೆಯಲ್ಲಿ ಹಂಪಿ ಪ್ರವಾಸೋಧ್ಯಮಕ್ಕೆ ಹೆಚ್ಚಿನ ಅಧ್ಯತೆ ನೀಡಲಾಗುವುದು ಎಂದು ಶೋಭಾ ಕರಂದ್ಲಾಜೆ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಇಂಜಿನಿಯರಿಂಗ್ ಸೀಟು ಶುಲ್ಕ ಇಳಿಕೆ, ಸಿಎಂ
ಭಾಗ್ಯಲಕ್ಷ್ಮಿ ಯೋಜನೆ ನಿಲ್ಲದು:ಸಿಎಂ












Click it and Unblock the Notifications