ಬೆಳಿಗ್ಗೆ ಹನ್ನೊಂದಾದರೂ ನಿದ್ದೆಯಿಂದೇಳದ ಮತದಾರರು
ಬೆಂಗಳೂರು, ಏ. 23 : ರಾಜ್ಯದ 17 ಲೋಕಸಭೆ ಕ್ಷೇತ್ರ ಸೇರಿದಂತೆ ದೇಶದ ವಿವಿಧ 12 ರಾಜ್ಯಗಳ 140 ಲೋಕಸಭೆ ಕ್ಷೇತ್ರಗಳಲ್ಲಿ ಮತದಾನ ಇಂದು ಆರಂಭವಾಗಿದೆ. ಬೆಳಗಿನಿಂದಲೇ ರಾಜ್ಯದ ವಿವಿಧೆಡೆ ಮತದಾರರು ನಿಧಾನವಾಗಿ ಮತದಾನ ಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುವ ದೃಶ್ಯ ಕಂಡು ಬಂದಿದೆ.
ಬೆಂಗಳೂರಿನಲ್ಲಿ ಬೆಳಿಗ್ಗೆ ಏಳಕ್ಕೆ ಮತದಾನ ಆರಂಭವಾಗಿದ್ದು, ಮತಗಟ್ಟೆಗಳಲ್ಲಿ ಜನಸಂಖ್ಯ ತುಂಬಾ ವಿರಳವಿತ್ತು. ನಗರದಲ್ಲಿ ಮತದಾನಕ್ಕೆ ಜನ ಅನಾಸಕ್ತಿ ತೋರಿಸುತ್ತಾರೆಂಬ ಅಪವಾದಕ್ಕೆ ಪುಷ್ಟಿಯಂತಿತ್ತು. ಕೆಂಗೇರಿ ಉಪನಗರದಲ್ಲಿ ಅನೇಕ ನಾಗರಿಕರಿಗೆ ಮತಗಟ್ಟೆಯ ವಿವರ ನೀಡದಿದ್ದುದರಿಂದ ಗೊಂದಲ ಸೃಷ್ಟಿಯಾಗಿತ್ತು. ಇದರಿಂದಾಗಿ ತಮ್ಮ ಹೆಸರು ಮತಪಟ್ಟಿಯಲ್ಲಿ ಹುಡುಕಾಡಲು ತಡಕಾಡುತ್ತಿದ್ದರು. ಬೆಳಗ್ಗೆ 9 ಗಂಟೆಗೆ ಹೊತ್ತಿಗೆ ಉತ್ತರ ಕನ್ನಡ ಶೇ.10, ಬೆಳಗಾವಿ ಶೇ.7, ಬಳ್ಳಾರಿ ಶೇ.10, ಬೀದರ್ ನಲ್ಲಿ ಶೇ.7, ಬಿಜಾಪುರ ಶೇ.9, ಬೆಂಗಳೂರು ಉತ್ತರದಲ್ಲಿ ಶೇ.16, ಬೆಂಗಳೂರು ದಕ್ಷಿಣ ಶೇ. 8ರಷ್ಟು ಮತದಾನವಾಗಿದೆ.
ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲಿ ಸುಮಾರು 300 ಮತದಾರರ ಹೆಸರು ನಾಪತ್ತೆಯಾಗಿರುದು ಬೆಳಕಿಗೆ ಬಂದಿದೆ. ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿರುವುದನ್ನು ಖಂಡಿಸಿ ಕೊಪ್ಪಳ ಜಿಲ್ಲೆಯ ಚುಂಚನಕಲ್ಲು ಗ್ರಾಮದಲ್ಲಿ ಮತದಾನಕ್ಕೆ ಮತದಾರರ ಬಹಿಷ್ಕಾರ ಮಾಡಿದ್ದಾರೆ.
ಚಿತ್ರದುರ್ಗ ಲೋಕಸಭೆ ಬಿಜೆಪಿ ಅಭ್ಯರ್ಥಿ ಜನಾರ್ದನಸ್ವಾಮಿ, ಮಿನಾಕ್ಷಿ ಕೃಷ್ಣ ಭೈರೇಗೌಡ, ರೇವು ನಾಯಕ್ ಬೆಳಮಗಿ, ಬಂಡೆಪ್ಪ ಕಾಶೆಂಪೂರ್, ದೇವಣ್ಣ ನಾಯಕ್, ಸುಭಾಷ್ ನೇಳಗಿ, ಗುರುಪಾದಪ್ಪ ನಾಗಮಾರಪಲ್ಲಿ, ಎನ್ ವೈ ಹನುಮಂತಪ್ಪ, ಜೆ ಶಾಂತಿ, ಅನಂತಕುಮಾರ್, ವಿ ಡಿ ಹೆಗ್ಡೆ, ಜಯಣ್ಣ, ಜಿ ಎಸ್ ಬಸವರಾಜು, ಮುದ್ದು ಹನುಮೇಗೌಡ, ಕೆ ಎಚ್ ಮುನಿಯಪ್ಪ, ಜಿ ಚಂದ್ರಣ್ಣ, ಸಿ ಪಿ ಯೋಗೀಶ್ವರ್, ಸಿ ಕೆ ಜಾಫರ್ ಷರೀಫ್, ಸುರೇಂದ್ರ ಬಾಬು, ಎಚ್ ಟಿ ಸಾಂಗ್ಲಿಯಾನ, ಎಚ್ ಎನ್ ಅನಂತಕುಮಾರ್, ಕೃಷ್ಣ ಭೈರೇಗೌಡ, ವೀರಪ್ಪ ಮೊಯ್ಲಿ, ಡಿ ಬಿ ಚಂದ್ರೇಗೌಡ, ಸಿ ಆರ್ ಮನೋಹರ್, ಮಾರ್ಗರೆಟ್ ಆಳ್ವ, ಗೌರಶಂಕರ್, ಕರುಣಾಕರ ರೆಡ್ಡಿ, ರತ್ನಾಕರ ಬಾಬು ವಿಲಾಸ್ ರಾವ್ ಆಲ್ ಮೇಲ್ ಕರ್, ರಮೇಶ್ ಜಿಗಜಿಣಗಿ ಮತ ಚಲಾಯಿಸಿದ್ದಾರೆ.
ಬಳ್ಳಾರಿಯ ಮತಗಟ್ಟೆ ನಂಬರ್ 44ರಲ್ಲಿ ಸಚಿವ ಶ್ರೀರಾಮುಲು ಮತ ಚಲಾಯಿಸಿದರು. ಬೆಳಗಾವಿ ಜೆಡಿಎಸ್ ಅಭ್ಯರ್ಥಿ ಎ ಬಿ ಪಾಟೀಲ್, ಸುರೇಶ್ ಅಂಗಡಿ, ಸಿದ್ದಗಂಗೆ ಶಿವಕುಮಾರ್ ಸ್ವಾಮಿಗಳು ಮತದಾನ ಮಾಡಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications