ನಕ್ಸಲರ ಒತ್ತೆಯಲ್ಲಿ ಝಾರ್ಖಂಡ್ ಪ್ಯಾಸೆಂಜರ್ ರೈಲು

ಈ ಕುರಿತು ಮಾಹಿತಿ ನೀಡಿದ ಝಾರ್ಖಂಡ್ ಪೊಲೀಸರು, ರೈಲು ಎಗಾರ ಜಿಲ್ಲೆಯ ನಿರ್ಜನ ಪ್ರದೇಶಕ್ಕೆ ಬರುತ್ತಿದ್ದಂತೆ ಬಂಡುಕೋರನೊಬ್ಬ ರೈಲಿನ ಚೈನ್ ಎಳೆದು ನಿಲ್ಲಿಸಿದ. ನಂತರ ಮಾವೋವಾದಿಗಳು ರೈಲನ್ನು ಒತ್ತೆಯಾಗಿರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಈ ರೈಲು ಬರ್ಖಾನ ದಿಂದ ಮೊಗಲ್ ಸರಾಯಿ ನಗರಕ್ಕೆ ಪ್ರಯಾಣ ಬೆಳೆಸುತ್ತಿತ್ತು. ಯಾವುದೇ ಪ್ರಾಣಾಪಾಯವಾದ ಘಟನೆ ನಡೆದಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪರಿಸ್ಥಿತಿಯನ್ನು ತಹಬಂದಿಗೆ ತರುವ ಪ್ರಯತ್ನ ನಡೆಯುತ್ತಿದೆ.
ಸರ್ಕಾರವನ್ನು ಗುರುಯಾಗಿಟ್ಟುಕೊಂಡು ಎರಡನೇ ಹಂತದ ಮತದಾನಕ್ಕೆ ತೊಂದರೆ ಉಂಟು ಮಾಡುವ ಉದ್ದೇಶದಿಂದ ಮಾವೋವದಿಗಳು ಈ ಕೃತ್ಯ ಎಸಗಿದ್ದಾರೆ. ಮೊದಲ ಹಂತದ ಚುನಾವಣೆಗೂ ಏಪ್ರಿಲ್ 16ರಂದು ಮಾವೋವಾದಿಗಳಿಂದ ಈ ಪ್ರಾಂತ್ಯದಲ್ಲಿ ವಿರೋಧ ವ್ಯಕ್ತವಾಗಿತ್ತು.
(ಏಜೆನ್ಸೀಸ್)












Click it and Unblock the Notifications