ಜಾರ್ಖಂಡ್ ರೈಲು ಅಪಹರಣ ಸುಖಾಂತ್ಯ
ರಾಂಚಿ, ಏ. 22 : ಏಳುನೂರಕ್ಕೂ ಅಧಿಕ ಮಂದಿ ಪ್ರಯಾಣಿಕರಿದ್ದ ಪ್ಯಾಸೆಂಜರ್ ರೈಲನ್ನು ಮಾವೋವಾದಿಗಳು ಒತ್ತೆಯಾಗಿಟ್ಟುಕೊಂಡಿದ್ದ ಘಟನೆ ಕೊನೆಗೂ ಸುಖಾಂತ್ಯ ಕಂಡಿದೆ. ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿ ಬಿಡುಗಡೆಯಾಗಿದ್ದು, 5 ಗಂಟೆಗಳ ಆತಂಕಕ್ಕೆ ತೆರೆ ಬಿದ್ದಿದೆ.
ರೈಲು ಎಗಾರ ಜಿಲ್ಲೆಯ ನಿರ್ಜನ ಪ್ರದೇಶಕ್ಕೆ ಬರುತ್ತಿದ್ದಂತೆ ಬಂಡುಕೋರನೊಬ್ಬ ರೈಲಿನ ಚೈನ್ ಎಳೆದು ನಿಲ್ಲಿಸಿದ್ದ. ನಂತರ ಮಾವೋವಾದಿಗಳು ರೈಲನ್ನು ಒತ್ತೆಯಾಗಿರಿಸಿಕೊಂಡಿದ್ದರು. ಸುಮಾರು 11.39 ಕ್ಕೆ ಮಾವೋವಾದಿಗಳು ರೈಲುನ್ನು ಬಿಟ್ಟು ತೆರಳಿದ್ದು, ರೈಲು ಇದೀಗ ಮುಂದಿನ ನಿಲ್ದಾಣಕ್ಕೆ ತೆರಳತೊಡಗಿದೆ ಎಂದು ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆಯೇ ಕೇಂದ್ರದಿಂದ ಎರಡು ಹೆಲಿಕ್ಯಾಪ್ಟರ್ ಗಳು ಹಾಗೂ ಸಮರ ವಿಮಾನವನ್ನು ತರಿಸಿಕೊಳ್ಳಲಾಗಿತ್ತು. ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಲಾಟೆಹಾರ್ ಜಿಲ್ಲಾಧಿಕಾರಿ ಸವೆಂದು ತಥಾಗತ್ ತಿಳಿಸಿದ್ದಾರೆ. ಇಂದು ಬೆಳಗ್ಗೆ 6.30ರ ಸುಮಾರಿಗೆ 200 ಮಂದಿ ಹೊಂದಿದ ಶಸ್ತ್ರ ಸಜ್ಜಿತ ಮಾವೋವಾದಿಗಳು ರೈಲು ಹಾಗೂ ಪ್ರಯಾಣಿಕರನ್ನು ಒತ್ತೆಯಾಳಾಗಿರಿಸಿಕೊಂಡಿದ್ದರು.
ಸರ್ಕಾರವನ್ನು ಗುರಿಯಾಗಿಟ್ಟುಕೊಂಡು ಎರಡನೇ ಹಂತದ ಮತದಾನಕ್ಕೆ ತೊಂದರೆ ಉಂಟು ಮಾಡುವ ಉದ್ದೇಶದಿಂದ ಮಾವೋವಾದಿಗಳು ಈ ಕೃತ್ಯ ಎಸಗಿದ್ದಾರೆ. ಮೊದಲ ಹಂತದ ಚುನಾವಣೆಗೂ ಏಪ್ರಿಲ್ 16ರಂದು ಮಾವೋವಾದಿಗಳಿಂದ ಈ ಪ್ರಾಂತ್ಯದಲ್ಲಿ ವಿರೋಧ ವ್ಯಕ್ತವಾಗಿತ್ತು.
(ದಟ್ಸ್ ಕನ್ನಡ ವಾರ್ತೆ)
ನಕ್ಸಲರ ಒತ್ತೆಯಲ್ಲಿ ಝಾರ್ಖಂಡ್ ಪ್ಯಾಸೆಂಜರ್ ರೈಲು












Click it and Unblock the Notifications