ಅಭಿವೃದ್ಧಿಗೆ ಐಟಿ ಬಳಕೆ : ಎಲ್ ಕೆ ಅಡ್ವಾಣಿ

Advani plegde IT mantra
ಬೆಂಗಳೂರು, ಏ. 21 : ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಅಭಿವೃದ್ಧಿಪರ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಮಾಹಿತಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುವುದು ಎಂದು ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಎಲ್ ಕೆ ಅಡ್ವಾಣಿ ಭರವಸೆ ನೀಡಿದರು.

ನಗರದ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಏರ್ಪಡಿಸಿದ್ದ ಬೃಹತ್ ಪ್ರಚಾರಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಗ್ರಾಮೀಣ ಮಟ್ಟಕ್ಕೆ ತಂತ್ರಜ್ಞಾನ ವಿಸ್ತರಣೆಯಾದರೆ, ದೊಡ್ಡ ಪ್ರಮಾಣದಲ್ಲಿ ಉದ್ಯೋಗವಾಕಾಶಗಳನ್ನು ಸೃಷ್ಟಿಸಬಹುದು. ದೇಶದಲ್ಲಿ ಆರು ಲಕ್ಷ ಹಳ್ಳಿಗಳಿವೆ. ಐಟಿಯಿಂದ ಪ್ರತಿ ಹಳ್ಳಿಯಲ್ಲಿ 20 ಮಂದಿಯಂತೆ 1.20 ಕೋಟಿ ಉದ್ಯೋಗವನ್ನು ನೀಡಬಹುದು ಎಂದು ಹೇಳಿದರು.

ಎನ್ ಡಿಎ ಅಧಿಕಾರದಲ್ಲಿದ್ದಾಗ ಎಲ್ಲ ಮಕ್ಕಳಿಗೂ ಶಿಕ್ಷಣ ನೀಡಲು ಸರ್ವಶಿಕ್ಷಾ ಅಭಿಯಾನವನ್ನು ಆರಂಭಿಸಿದೆವು. ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಶಿಕ್ಷಣ ಅಳವಡಿಸಲಾಗುವುದುಯ ಐಟಿ ಮೂಲಕ ಪ್ರತಿ ಭಾರತೀಯರಿಗೂ ವಿವಿಧೋದ್ದೇಶ ಗುರುತಿನ ಚೀಟಿ ನೀಡಲಾಗುವುದು ಎಂದು ಅಡ್ವಾಣಿ ಹೇಳಿದರು. ಸಂಸತ್ ಮೇಲೆ ದಾಳಿ ನಡೆಸಿದ ಅಫ್ಜಲ್ ಗುರು ನೇಣಿಗೇರಿಸುವುದನ್ನು ಬಿಟ್ಟು ಮತ ರಾಜಕಾರಣ ಮಾಡುತ್ತಿದೆ. ಭಾರತದ ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡಲು ಹೊರಟ ಉಗ್ರರನ್ನು ಮಟ್ಟ ಹಾಕುವ ವಿಚಾರದಲ್ಲಿ ಧರ್ಮವನ್ನು ತಳಕು ಹಾಕಬಾರದು ಎಂದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+