ಬಿಜಾಪುರ ಲೋಕಸಭೆ ಕ್ಷೇತ್ರ ಪರಿಚಯ
ಬೆಂಗಳೂರು, ಏ. 17 : ಈ ಬಾರಿಯಿಂದ ಬಿಜಾಪುರ ಪರಿಶಿಷ್ಟ ಜಾತಿಗೆ ಮೀಸಲು. ಎಲ್ಲಾ ಇದ್ದರೂ ಜನರಿಗೆ ಏನೂ ಇಲ್ಲದ ಪರಿಸ್ಥಿತಿ. ನದಿ ಇದ್ದರೂ ಬರ, ಐತಿಹಾಸಿಕ ಪ್ರವಾಸಿ ಸ್ಥಳವಿದ್ದರೂ ಬಿಸಿಲೂರು. ಆಲಮಟ್ಟಿ ಅಣೆಕಟ್ಟು ಇಲ್ಲಿನ ಜನತೆಗೆ ವರ ಮತ್ತು ಶಾಪ. ಮುದ್ದೇಬಿಹಾಳ, ಬಸವನ ಬಾಗೇವಾಡಿ, ಸಿಂಧಗಿ ಮತ್ತು ಇಂಡಿ ತಾಲೂಕು ಮುಕ್ತಿ ಪಡೆದಿದ್ದರೆ ಬಿಜಾಪುರ ತಾಲೂಕಿನ ಬಹುತೇಕ ಹಳ್ಳಿಗಳು ನೀರಾವರಿ ಯೋಜನೆಯಿಂದ ವಂಚಿತವಾಗಿದೆ.
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ನಡುವೆ ನೇರ ಹಣಾಹಣಿ. ಇಲ್ಲಿನ ಬಿಜೆಪಿಗೆ ಅಭ್ಯರ್ಥಿ ರಮೇಶ್ ಜಿಗಜಿಣಗಿ ಮೂಲತಃ ದ್ರಾಕ್ಷಿ ವ್ಯಾಪಾರಿ. ಇಷ್ಟು ದಿನ ಚಿಕ್ಕೋಡಿಯಲ್ಲಿ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು. ಇನ್ನು ಒಂದು ಕಾಲದ ಸ್ಪಿನ್ ಬೌಲರ್, ಕ್ರಿಕೆಟಿಗ ಪ್ರಕಾಶ್ ರಾಥೋಡ ಕಾಂಗ್ರೆಸ್ ಅಭ್ಯರ್ಥಿ. ಚುನಾವಣೆ ಇರುವುದರಿಂದ ಇಲ್ಲೇ ವಾಸವಾಗಿದ್ದಾರೆ, ಇಲ್ಲವಾದರೆ ಬೆಂಗಳೂರಿನಲ್ಲೇ ಹೆಚ್ಚು ವಾಸ. ಒಟ್ಟಿನಲ್ಲಿ ಕ್ಷೇತ್ರದ ಜನತೆಗೆ ಇಬ್ಬರು ಹೊಸಬರೇ.
ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಐದು ಬಿಜೆಪಿ ಮತ್ತು ಮೂರರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಕ್ಷೇತ್ರದ ಸದ್ಯದ ಲೆಕ್ಕಾಚಾರ ನೋಡಿದರೆ ಏಕದಿನ ಪಂದ್ಯದ ತರ. ಕೊನೆ ಓವರ್ ನಲ್ಲಿ ವಿಜಯಲಕ್ಷಿ ಯಾರಿಗೆ ಒಲಿಯುತ್ತಾಳೋ ನೋಡಬೇಕು. ಲಂಬಾಣಿ ಜನಾಂಗದ ಮೇಲೆ ಎಲ್ಲರ ಕಣ್ಣು, ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಪರಿಶಿಷ್ಟ ಜಾತಿಯವರ ಮತವಿದೆ. ಕ್ಷೇತ್ರದ ಕೆಲವೊಂದು ಕಾಂಗ್ರೆಸ್ ಶಾಸಕರು ಶತಾಯುಗತಾಯು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಹೀಗಾಗಿ ಮೂರು ಕ್ಷೇತ್ರಗಳಲ್ಲಿ ಪಕ್ಷದ ಸ್ಥಿತಿ ಉತ್ತಮವಾಗಿದೆ. ಆದರೆ ಸುಮಾರು 3 ಲಕ್ಷವಿರುವ ಲಿಂಗಾಯಿತ ಸಮಾಜದಲ್ಲಿ ಹೆಚ್ಚು ಪ್ರೀತಿ ಸಂಪಾದಿಸಿರುವ ರಮೇಶ್ ಜಿಗಜಿಣಗಿ ಯಾವ ಜಾದು ಮಾಡುತ್ತಾರೆಂದು ಕಾದುನೋಡಬೇಕಿದೆ.
* ಕ್ಷೇತ್ರ - ಬಿಜಾಪುರ ಲೋಕಸಭೆ ಕ್ಷೇತ್ರ (ಮೀಸಲು ಪರಿಶಿಷ್ಟ ಜಾತಿ)
* ಚುನಾವಣೆ ದಿನಾಂಕ - ಏಪ್ರಿಲ್ 23
ಅಭ್ಯರ್ಥಿಗಳು
* ಕಾಂಗ್ರೆಸ್ - ಪ್ರಕಾಶ್ ರಾಥೋಡ
* ಬಿಜೆಪಿ - ರಮೇಶ್ ಜಿಗಜಿಣಗಿ
* ಜನತಾದಳ (ಎಸ್) - ವಿಲಾಸರಾವ್ ಆಲಮೇಲಕರ
* ಎಸ್ಪಿ - ಕನಮಡಿ ಸುಧಾಕರ ಮಲ್ಲೇಶ್
ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು
* ಮುದ್ದೇಬಿಹಾಳ
* ದೇವರ ಹಿಪ್ಪರಗಿ
* ಬಸವನ ಬಾಗೇವಾಡಿ
* ಬಬ್ಬಲೇಶ್ವರ
* ನಾಗಠಾಣ
* ಇಂಡಿ
* ಸಿಂಧಗಿ
* ಬಿಜಾಪುರ ನಗರ
* ಒಟ್ಟು ಮತದಾರರು - 13.52 ಲಕ್ಷ
* ಪುರುಷರು - 6.99 ಲಕ್ಷ
* ಮಹಿಳೆಯರು - 6.53 ಲಕ್ಷ
ಜಾತಿವಾರು ಲೆಕ್ಕಾಚಾರ (ಅಂದಾಜು)
* ಲಿ೦ಗಾಯಿತ 3 ಲಕ್ಷ
* ಲ೦ಬಾಣಿ 2.3 ಲಕ್ಷ
* ಪರಿಶಿಷ್ಟ ಜಾತಿ ಮತ್ತು ಪ೦ಗಡ 2.40 ಲಕ್ಷ
* ಕುರುಬರು 2.3 ಲಕ್ಷ
* ಮುಸ್ಲಿ೦ 1.60 ಲಕ್ಷ
* ಕ್ರೈಸ್ತರು 65 ಸಾವಿರ
* ಇತರರು - 1.3 ಲಕ್ಷ
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications