ಮಧ್ಯಪ್ರದೇಶದಲ್ಲಿ ಅಡ್ವಾಣಿ ಮೇಲೆ ಚಪ್ಪಲಿ ಎಸೆತ

ಕೆಲ ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಸಿಖ್ ವಿರೋಧಿ ನೀತಿಯನ್ನು ವಿರೋಧಿಸಿ ಪತ್ರಕರ್ತ ದೈನಿಕ್ ಜಾಗರಣ್ ಜರ್ನೇಲ್ ಸಿಂಗ್ ಗೃಹ ಸಚಿವ ಪಿ. ಚಿದಂಬರಂ ಮೇಲೆ ಪಾದರಕ್ಷೆ ಎಸೆದು ಬಂಧಿತನಾಗಿದ್ದ. ಆದರೆ, ಈ ಬಾರಿ ಅಡ್ವಾಣಿ ಮೇಲೆ ಚಪ್ಪಲಿ ಎಸೆದಿರುವುದು ಸ್ವತಃ ಬಿಜೆಪಿ ಪಕ್ಷದ ಕಾರ್ಯಕರ್ತನೆಂಬುದು ಗಮನಾರ್ಹ.
ಚಪ್ಪಲಿ ಎಸೆದವನನ್ನು ಪಾವಸ್ ಅಗರವಾಲ್ ಎಂದು ಗುರುತಿಸಲಾಗಿದೆ. ಆತನನ್ನು ಬಂಧಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.












Click it and Unblock the Notifications