ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದಲ್ಲಿ ಅಡ್ವಾಣಿ ಮೇಲೆ ಚಪ್ಪಲಿ ಎಸೆತ

By Staff
|
Google Oneindia Kannada News

LK Advani
ಭೋಪಾಲ್, ಏ. 16 : ಮಧ್ಯಪ್ರದೇಶದ ಕತ್ನಿ ಎಂಬಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ಲಾಲ್ ಕೃಷ್ಣ ಅಡ್ವಾಣಿ ಅವರ ಮೇಲೆ ಕಾರ್ಯಕರ್ತನೋರ್ವ ಚಪ್ಪಲಿ ಎಸೆದು ರಾದ್ಧಾಂತ ಎಬ್ಬಿಸಿದ್ದಾನೆ.

ಕೆಲ ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಸಿಖ್ ವಿರೋಧಿ ನೀತಿಯನ್ನು ವಿರೋಧಿಸಿ ಪತ್ರಕರ್ತ ದೈನಿಕ್ ಜಾಗರಣ್ ಜರ್ನೇಲ್ ಸಿಂಗ್ ಗೃಹ ಸಚಿವ ಪಿ. ಚಿದಂಬರಂ ಮೇಲೆ ಪಾದರಕ್ಷೆ ಎಸೆದು ಬಂಧಿತನಾಗಿದ್ದ. ಆದರೆ, ಈ ಬಾರಿ ಅಡ್ವಾಣಿ ಮೇಲೆ ಚಪ್ಪಲಿ ಎಸೆದಿರುವುದು ಸ್ವತಃ ಬಿಜೆಪಿ ಪಕ್ಷದ ಕಾರ್ಯಕರ್ತನೆಂಬುದು ಗಮನಾರ್ಹ.

ಚಪ್ಪಲಿ ಎಸೆದವನನ್ನು ಪಾವಸ್ ಅಗರವಾಲ್ ಎಂದು ಗುರುತಿಸಲಾಗಿದೆ. ಆತನನ್ನು ಬಂಧಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X