ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಬಳ್ಳಾಪುರ ಲೋಕಸಕ್ಷೆ ಕ್ಷೇತ್ರ ಪರಿಚಯ

By Staff
|
Google Oneindia Kannada News

Veerappa Moily
ಬೆಂಗಳೂರು, ಏ. 13 : ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಮತಗಳು ಇಲ್ಲಿ ಎಲ್ಲಾ ಪಕ್ಷಕ್ಕೂ ನಿರ್ಣಾಯಕ. ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾದರೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮತ್ತು ಕ್ಷೇತ್ರ ಪುನರ್ ವಿಂಗಡಣೆಯ ನಂತರ ಬಿಜೆಪಿ ಅಬ್ಬರ ಕ್ಷೇತ್ರದಲ್ಲಿ ಜೋರಾಗಿದೆ.

ದ್ರಾಕ್ಷಿ, ಆಲೂ, ರೇಷ್ಮೆ ಸೇರಿದಂತೆ ಮತ್ತು ತೋಟಗಾರಿಕೆ ಬೆಳೆಗಳಿಗೆ ಹೆಸರುವಾಸಿಯಾಗಿರುವ ಚಿಕ್ಕಬಳ್ಳಾಪುರ ಹೈನುಗಾರಿಕೆಯಲ್ಲೂ ಮೈಲುಗಲ್ಲು ಸಾಧಿಸಿದೆ. ಪ್ರಸಿದ್ದ ನಂದಿ ಗಿರಿಧಾಮ, ಸ್ಕಂದಗಿರಿ ಬಿಟ್ಟರೆ ಪರಿಸರ ಪ್ರಿಯರು ನೋಡುವಂತ ಮತ್ತೊಂದು ಸ್ಥಳ ಕ್ಷೇತ್ರದಲ್ಲಿಲ್ಲ. ಮತ್ತೆ ಯಥಾಪ್ರಕಾರ ರಾಜಧಾನಿಗೆ ಹತ್ತಿರವಿರುವುದರಿಂದ ರಿಯಲ್ ಎಸ್ಟೇಟ್ ವ್ಯವಹಾರ ಜೋರು ಜೋರು.

ಕ್ಷೇತ್ರ - ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರ
* ಚುನಾವಣೆ ದಿನಾಂಕ - ಏಪ್ರಿಲ್ 23

ಅಭ್ಯರ್ಥಿಗಳು
* ಕಾಂಗ್ರೆಸ್ - ವೀರಪ್ಪ ಮೊಯ್ಲಿ
* ಬಿಜೆಪಿ - ಎಸ್ ಎಲ್ ಅಶ್ವಥನಾರಾಯಣ
* ಜನತಾದಳ - ಸಿ ಆರ್ ಮನೋಹರ್

ಕ್ಷೇತ್ರ ವ್ಯಾಪ್ತಿಯ ತಾಲೂಕುಗಳು

* ಗೌರಿಬಿದನೂರು
* ಬಾಗೇಪಲ್ಲಿ
* ಚಿಕ್ಕಬಳ್ಳಾಪುರ
* ದೊಡ್ಡಬಳ್ಳಾಪುರ
* ನೆಲಮಂಗಲ
* ಯಲಹಂಕ
* ದೇವನಹಳ್ಳಿ
* ಹೊಸಕೋಟೆ.

* ಒಟ್ಟು ಮತದಾರರು - 15 ಲಕ್ಷ
* ಪುರುಷರು - 7.80 ಲಕ್ಷ
* ಮಹಿಳೆಯರು - 7.20 ಲಕ್ಷ

ಜಾತಿವಾರು ಲೆಕ್ಕಾಚಾರ
* ಒಕ್ಕಲಿಗ -2.80 ಲಕ್ಷ
* ಬಲಿಜ - 2.10 ಲಕ್ಷ
* ಕುರುಬ ಮತ್ತು ನಾಯಕ - 3.20 ಲಕ್ಷ
* ಎಸ್ ಸಿ, ಎಸ್ ಟಿ 1.8 ಲಕ್ಷ
* ಲಿಂಗಾಯತ ಮತ್ತು ನೇಕಾರ -1.60 ಲಕ್ಷ
* ಗೊಲ್ಲ - 80 ಸಾವಿರ
* ಭೋವಿ 70 ಸಾವಿರ
* ಇತರೆ 2 ಲಕ್ಷ

ಕ್ಷೇತ್ರದ ಸಮಸ್ಯೆಗಳು

* ವಿದ್ಯಾವಂತ ಯುವಜನ ಸಮೀಪದ ರಾಜಧಾನಿಯತ್ತ ಆಕರ್ಷಿತ
* ಕೃಷಿಯಲ್ಲಿ ಕುಸಿತ
* ಕೃಷಿಭೂಮಿ ರಿಯಲ್ ಎಸ್ಟೇಟ್ ಪಾಲು
* ಶಾಶ್ವತ ಸಮಸ್ಯೆಯಾದ ನಿರುದ್ಯೋಗ ಮತ್ತು ಬಡತನ
* ಬೇಸಿಗೆಯಲ್ಲಿ ನೀರಿಗಾಗಿ ಹಾಹಾಕಾರ

(ದಟ್ಸ್ ಕನ್ನಡ ವಾರ್ತೆ)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X