ಐದು ವರ್ಷದೊಳಗೆ ಎಲ್ಲರಿಗೂ ಸೂರು, ದೇವೇಗೌಡ

ಪ್ರಸಕ್ತ ಲೋಕಸಭೆ ಚುನಾವಣೆಯ ಪ್ರಣಾಳಿಕೆಯ ಕನ್ನಡ ಅವತರಣಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಬಡವರ ಕಂಬನಿ ಒರೆಸುತ್ತೇವೆ. ಇಂದು ನಮ್ಮ ಸಂಕಲ್ಪ ಎಂದು ಗೌಡರು ಹೇಳಿದರು. ಮುಂದಿನ ಐದು ವರ್ಷದೊಳಗೆ ದೇಶಾದ್ಯಂತ ಸೂರಿಲ್ಲದವರನ್ನು ಗುರುತಿಸಿ ಪ್ರತಿಯೊಬ್ಬರಿಗೂ ಮನೆ ಹಂಚಿಕೆ ಮಾಡುವುದಾಗಿ ಭರವೆಸೆ ನೀಡಿದರು.
ಗ್ರಾಮೀಣ ಬಡವರಿಗಾಗಿ ಸರ್ಕಾರ ಪ್ರಾಯೋಜಿತ ವಸತಿ ಯೋಜನೆಯಡಿ ನೀಡುವ ಸಹಾಯಧನ ಹೆಚ್ಚಿಸಲಾಗುವುದು. ಅತ್ಯಂತ ಕಡಿಮೆ ದರದಲ್ಲಿ ಮನೆ ಸಾಲ ನೀಡುವ ರಾಷ್ಟ್ರೀಯ ವಸತಿ ನೀತಿಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು. ರೈತರ ಆತ್ಮಹತ್ಯೆ ತಡೆಗಟ್ಟಲು 1991 ರಿಂದ ಸುಸ್ತಿಯಾಗಿ ಬಾಕಿ ಉಳಿದಿರುವ ಸಣ್ಣ, ಅತಿ ಸಣ್ಣ ರೈತರು ಸಾರ್ವಜನಿಕ ಹಾಗೂ ಸಹಕಾರ ಬ್ಯಾಂಕ್ ಗಳ ಮೂಲಕ ಪಡೆದಿರುವ ಎಲ್ಲ ಸಾಲವನ್ನು ಮನ್ನಾ ಮಾಡಲಾಗುವುದು. ಬ್ಯಾಂಕ್ ಗಳಿಗೆ ಸಾಲದ ಹಣವನ್ನು ಕಂತಿನ ರೂಪದಲ್ಲಿ ನೀಡಲಾಗುವುದು ಎಂದು ಗೌಡರು ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications