Get Updates
Get notified of breaking news, exclusive insights, and must-see stories!

ತುಮಕೂರು ಗೌರಿಶಂಕರ ಸ್ವಾಮೀಜಿಗಳಿಗೆ ಜೀವ ಬೆದರಿಕೆ

Gowrishankara Swamiji
ಬೆಂಗಳೂರು, ಏ. 8 : ಭಕ್ತರ ವಿರೋಧದ ನಡುವೆ ತುಮಕೂರು ಲೋಕಸಭೆ ಕಣಕ್ಕಿಳಿದಿರುವ ತುಮಕೂರು ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿ ಆಗಿರುವ ಗೌರಿ ಶಂಕರಸ್ವಾಮೀಜಿಗಳಿಗೆ ಜೀವ ಬೆದರಿಕೆ ಕರೆಗಳು ಬರತೊಡಗಿವೆ. ಇದನ್ನು ಸ್ವತಃ ಸ್ವಾಮೀಜಿಗಳೇ ಇಂದು ನಗರದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ತುಮಕೂರು ಲೋಕಸಭೆ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಮೂಲಕ ಅಖಾಡಕ್ಕೆ ಇಳಿದಿರುವ ನನಗೆ ಅನೇಕ ಬೆದರಿಕೆ ಕರೆಗಳು ಬಂದಿವೆ. ಕೂಡಲೇ ನಾಮಪತ್ರ ವಾಪಸ್ ಪಡೆಯದಿದ್ದರೆ ಪರಿಸ್ಥಿತಿ ನೆಟ್ಟಗಿರುವುದು ಎಂದು ಜೀವ ಬೆದರಿಕೆಗಳನ್ನು ಹಾಕಿದ್ದಾರೆ ಎಂದು ಸ್ವಾಮೀಜಿ ಹೇಳಿದರು. ಕೆಲ ಹಿತಾಸಕ್ತಿಗಳು ನನ್ನ ವಿರುದ್ಧ ಬಾರಿ ಸಂಚು ರೂಪಿಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಶ್ರೀಗಳು, ಯಾವ ಕಾರಣಕ್ಕೂ ನಾನು ನಾಮಪತ್ರವನ್ನು ಹಿಂದಕ್ಕೆ ಪಡೆಯುವುದಿಲ್ಲ. ನನ್ನ ಸ್ಪರ್ಧೆ ಖಚಿತ ಎಂದು ಹೇಳಿದರು.

ಜನ ಕಲ್ಯಾಣಕ್ಕಾಗಿ ರಾಜಕೀಯ ಇಳಿದಿರುವೆ. ನನಗೆ ಯಾವ ಆಸೆ, ಅಮಿಷಗಳನ್ನು ಹಮ್ಮು ಬಿಮ್ಮು ಇಲ್ಲ. ಸನ್ಯಾಸಿಯಾಗಿರುವ ನಾನು ಜೀವವಿರುವವರೆಗೂ ಜನರ ಹಿತಕ್ಕಾಗಿ ಬಡಿದಾಡುವೆ ಎಂದು ಸ್ವಾಮೀಜಿಗಳು ಹೇಳಿದರು. ದೇಶದ ಹಿತಕ್ಕೆ ಸ್ವಾಮೀಜಿಗಳು ಕೂಡಾ ರಾಜಕೀಯಕ್ಕೆ ಇಳಿಯವುದು ತಪ್ಪಲ್ಲ ಎಂದು ಗೌರಿಶಂಕರ ಸ್ವಾಮೀಜಿಗಳು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+