ವಿದಿಶಾ ಕ್ಷೇತ್ರದಲ್ಲಿ ಸುಷ್ಮಾ ಸ್ವರಾಜ್ ಬಹುತೇಕ ಜಯ
ಭೂಪಾಲ್, ಏ. 7 : ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಸ್ಪರ್ಧಿಸುತ್ತಿರುವ ವಿದಿಶಾ ಲೋಕಸಭಾ ಕ್ಷೇತ್ರದಲ್ಲಿ ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರಾಜ್ ಕುಮಾರ್ ಪಟೇಲ್ ನಿಗದಿತ ಸಮಯದಲ್ಲಿ 'ಎ ಫಾರಂ' ಸಲ್ಲಿಸಲು ವಿಫಲರಾದ ಹಿನ್ನಲೆಯಲ್ಲಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ.
ಕಾಂಗ್ರೆಸ್ ಹೈಕಮಾಂಡ್ ರಾಜ್ ಕುಮಾರ್ ಅವರಿಗೆ ಎ ಫಾರಂ ಅನ್ನು ಮೊದಲೇ ಒದಗಿಸಿತ್ತು. ಆದರೆ ಇವರು ಬಿ ಫಾರಂ ಜೊತೆ ಎ ಫಾರಂ ನಕಲು ಪ್ರತಿಗಳನ್ನು ನಾಮಪತ್ರದ ಜೊತೆ ಚುನಾವಣ ಅಧಿಕಾರಿಗಳಿಗೆ ಸಲ್ಲಿಸಿದ್ದರು. ಮೂಲ ದಾಖಲೆಯಿಲ್ಲದ ನಾಮಪತ್ರವನ್ನು ಅಧಿಕಾರಿಗಳು ಸ್ವೀಕರಿಸಲು ಒಪ್ಪದಿರುವುದರಿಂದ ಅವರ ನಾಮಪತ್ರ ತಿರಸ್ಕೃತಗೊಂಡಿತು.
ರಾಜ್ ಕುಮಾರ್ ಪಟೇಲ್ ಅವರಿಗೆ ನಿಗದಿತ ಸಮಯದಲ್ಲಿ ಎ ಫಾರಂ ನೀಡಿದ್ದರೂ ಅವರು ಅಧಿಕಾರಿಗಳಿಗೆ ಮೂಲ ದಾಖಲೆ ನೀಡದೇ ಇರುವ ಕ್ರಮಕ್ಕೆ ಕಾಂಗ್ರೆಸ್ ಕೆ೦ಡಾಮ೦ಡಲವಾಗಿದ್ದು, ಅವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications