ಸಿಖ್ ಹತ್ಯಾಕಾಂಡ, ಟೈಟ್ಲರ್ ನಿರಪರಾಧಿ

1984 ರಲ್ಲಿ ಸಿಖ್ ಸಮುದಾಯದ ಬಯಾಂತ್ ಸಿಂಗ್ ನೇತೃತ್ವದಲ್ಲಿ ಮಾಜಿ ಪ್ರಧಾನಮಂತ್ರಿ ದಿವಂಗತ ಇಂದಿರಾ ಗಾಂಧಿ ಅವರ ಗುಂಡಿಟ್ಟು ಕೊಲೆ ಮಾಡಲಾಗಿತ್ತು. ಇದಕ್ಕೆ ಪ್ರತಿಕಾರವಾಗಿ ಸಿಖ್ ರ ಮೇಲೆ ತೀವ್ರವಾದ ದಾಳಿ ನಡೆದಿತ್ತು. ಈ ಹತ್ಯಾಕಾಂಡದಲ್ಲಿ ನೂರಾರು ಅಮಾಯಕ ಸಿಖ್ ಜನರನ್ನು ಕಾಂಗ್ರೆಸ್ ಕಾರ್ಯಕರ್ತರು ಹತ್ಯೆಗೈದಿದ್ದರು. ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಖ್ ರನ್ನು ಹತ್ಯೆ ಮಾಡಲು ಜಗದೀಶ್ ಟೈಟ್ಲರ್ ಆದೇಶ ನೀಡಿದ್ದಾರೆ ಎಂದು ಆರೋಪಿಸಿ ಜಸ್ಬೀರ್ ಸಿಂಗ್ ಎಂಬುವವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಸಿಖ್ ಹತ್ಯಾಕಾಂಡ ಪ್ರಕರಣದ ತನಿಖೆಗೆ ನಾನಾವತಿ ಆಯೋಗವನ್ನು ನೇಮಿಸಲಾಗಿತ್ತು.
ಸಿಬಿಐ ಕ್ರಮಕ್ಕೆ ತೀವ್ರ ಸಂತಸ ವ್ಯಕ್ತಪಡಿಸಿರುವ ಜಗದೀಶ್ ಟೈಟ್ಲರ್, ಕೆಲ ಶಕ್ತಿಗಳು ನನ್ನನ್ನು ಬಲಿಪಶು ಮಾಡಲು ಯತ್ನಿಸಿದವು. ಆದರೆ, ಯಾವ ತಪ್ಪು ಮಾಡದ ನಾನು, ನಿರಪರಾಧಿ ಎಂದು ಸಿಬಿಐ ನನ್ನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯಲು ನಿರ್ಧರಿಸಿರುವುದು ನ್ಯಾಯವನ್ನು ಎತ್ತಿಹಿಡಿದಂತಾಗಿದೆ ಎಂದಿದ್ದಾರೆ. ಆದರೆ, ಸಿಬಿಐ ನಿಲುವಿಗೆ ಬಿಜೆಪಿ ತೀವ್ರ ವಿರೋಧಿ ವ್ಯಕ್ತಪಡಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications