ಎಸ್ ಎಸ್ ಎಲ್ ಸಿ ಪರೀಕ್ಷೆ : 8 ವಿದ್ಯಾರ್ಥಿಗಳು ಡಿಬಾರ್
ರಾಯಚೂರು, ಏ. 1 : ಎಸ್ಎಸ್ಎಲ್ ಸಿ ಗಣಿತ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ನಗರದ ವಿವಿಧ ಪರೀಕ್ಷಾ ಕೇಂದ್ರದ 8 ವಿದ್ಯಾರ್ಥಿಗಳನ್ನು ಹೊರಕಳುಹಿಸಲಾಗಿದೆ. ಹಾಗೂ ಪರೀಕ್ಷಾ ಕರ್ತವ್ಯದ ಲೋಪದ ಕಾರಣ ನಗರದ ವಿವಿಧ ಶಾಲೆಯ ಐದು ಜನ ಕೊಠಡಿ ಮೇಲ್ವಿಚಾರಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ ಘಟನೆ ಇಂದು ಜರುಗಿದೆ.
ಮಂಗಳವಾರದಂದು ಎಸ್ ಎಸ್ ಎಲ್ ಸಿ ಗಣಿತ ವಿಷಯ ಕುರಿತಂತೆ ಜಿಲ್ಲೆಯ 61 ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ 20,420 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು, 19,821 ವಿದ್ಯಾರ್ಥಿಗಳು ಹಾಜರಾಗಿದ್ದು 599 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಪರೀಕ್ಷಾ ಅಕ್ರಮದಲ್ಲಿ ತೊಡಗಿದ್ದ ನಗರದ ಕೆ ಇ ಬಿ ಶಾಲೆಯ ನಾಲ್ಕು ವಿದ್ಯಾರ್ಥಿಗಳು, ಪೊಲೀಸ್ ಕಾಲೋನಿ ಮತ್ತು ಮುನ್ನೂರುವಾಡಿ ಪ್ರೌಢ ಶಾಲೆಯ ತಲಾ ಎರಡು ವಿದ್ಯಾರ್ಥಿಗಳು ಸೇರಿದಂತೆ 8 ಜನ ವಿದ್ಯಾರ್ಥಿಗಳನ್ನು ಹೊರಹಾಕಲಾಗಿದೆ.
ಪರೀಕ್ಷಾ ಕರ್ತವ್ಯದ ಲೋಪದ ಕಾರಣ ರಾಯಚೂರು ನಗರದ ಪೊಲೀಸ್ ಕಾಲೋನಿ ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕರಾದ ಶಿಕ್ಷಕಿಯರಾದ ಸೌಭಾಗ್ಯ, ಶಹಿದಾಬಿ, ಮಾಣಿಕ್ ನಗರ ಸ ಕಿ ಪ್ರಾ ಶಾಲಾ ಕೇಂದ್ರದ ಕೊಠಡಿ ಮೇಲ್ವಿಚಾರಕಿ ತಿರುಮಲಮ್ಮ, ಹಿಂದಿ ವರ್ದಮಾನ ಪ್ರೌಢ ಶಾಲೆಯ ಕೊಠಡಿ ಮೇಲ್ವಿಚಾರಕ ಹನುಮಂತ ಹಾಗೂ ಚಂದ್ರಬಂಡಾ ಪ್ರೌಢಶಾಲೆಯ ಸರಿತ ಇವರನ್ನು ಪರೀಕ್ಷಾ ಕಾರ್ಯದಿಂದ ಬಿಡುಗಡೆಗೊಳಿಸಿ ಹೊರಹಾಕಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಎಸ್ಎಸ್ಎಲ್ಸಿ ಪರೀಕ್ಷೆ: 44 ವಿದ್ಯಾರ್ಥಿಗಳ ಡಿಬಾರ್
ಎಸ್ಎಸ್ಎಲ್ಸಿ ಪರೀಕ್ಷೆಗೆ 8.58 ಲಕ್ಷ ವಿದ್ಯಾರ್ಥಿಗಳು












Click it and Unblock the Notifications