ವರುಣ್ ಗಾಂಧಿ ಹತ್ಯೆಗೆ ಛೋಟಾ ಶಕೀಲ್ ಸಂಚು
ನವದೆಹಲಿ, ಏ.1 : ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿರುವ ಗಾಂಧಿ ಮನೆತನ ಕೊಂಡಿ ಹಾಗೂ ಪಿಲಿಭಿತ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಹತ್ಯೆಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಚರ ಛೋಟಾ ಶಕೀಲ್ ಸಂಚು ರೂಪಿಸಿರುವ ಆಘಾತಕಾರಿ ಅಂಶವನ್ನು ಗುಪ್ತಚರ ಇಲಾಖೆ ಬಹಿರಂಗಗೊಳಿಸಿದೆ.
ಇದೇ ಕಾರಣದಿಂದ ವರುಣ್ ಗಾಂಧಿ ಅವರನ್ನು ಪಿಲಿಭಿತ್ ಜೈಲಿನಿಂದ ಇಟಾ ಜೈಲಿಗೆ ವರ್ಗಾವಣೆ ಮಾಡಲಾಗಿದೆ ಪಿಲಿಭಿತ್ ಜಿಲ್ಲಾ ಜೈಲಿನ ಜೈಲು ಅಧಿಕಾರಿ ಮುಖೇಶ್ ಅರೋರಾ ಸ್ಪಷ್ಟಪಡಿಸಿದ್ದಾರೆ. ವರುಣ್ ಗಾಂಧಿ ಹತ್ಯೆಗೆ ಕುಖ್ಯಾತ ಶಾರ್ಪ್ ಶೂಟರ್ ರಶೀದ್ ಮಾಲ್ ಬರಿಯನ್ನು ಛೋಟಾ ಶಕೀಲ್ ನೇಮಿಸಿದ್ದಾನೆ ಎಂದು ಮಾರ್ಚ್ 22 ರಂದು ಕೇಂದ್ರ ಗುಪ್ತಚರ ಇಲಾಖೆಯು ಉತ್ತರ ಪ್ರದೇಶ ಗೃಹ ಇಲಾಖೆಗೆ ಎಚ್ಚರಿಕೆ ನೀಡಿದೆ.
(ದಟ್ಸ್ ಕನ್ನಡ ವಾರ್ತೆ)
ಛೋಟಾ ಶಕೀಲ್ ನ ಐವರು ಸಹಚರರ ಬಂಧನ












Click it and Unblock the Notifications