ಬಂಗಾರಪ್ಪಗೆ ಸಿಎಂ ಯಡಿಯೂರಪ್ಪ ಸವಾಲ್
ಶಿವಮೊಗ್ಗ ,ಮಾ 30: ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಬಂಗಾರಪ್ಪ 1967ರಲ್ಲಿ ರಾಜಕೀಯ ಪ್ರವೇಶ ಮಾಡಿದವರು. ನನ್ನ ಮಗ ರಾಘವೇಂದ್ರ 1973ರಲ್ಲಿ ಹುಟ್ಟಿದ್ದು. 1983ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೊರಬದಿಂದ ಪ್ರಚಾರಕ್ಕೆ ಹೋಗದೇನೇ ಗೆದ್ದಿದ್ದೇನೆ ಎಂದು ಬಂಗಾರಪ್ಪ ಹೇಳಿಕೆ ನೀಡುತ್ತಾರೆ. ನನ್ನ ಮಗ ಸ್ಪರ್ಧಿಸಿರುವ ಈ ಕ್ಷೇತ್ರದಲ್ಲಿ ಸಿಎಂ ಪದೇ ಪದೇ ಬರುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಇಂಥ ಆರೋಪ ಮಾಡುವ ಅವರಿಗೆ ಒಂದು ಸವಾಲು ಎಸೆಯುತ್ತಿದ್ದೇನೆ, ಅವರು ಮತ್ತು ಅವರ ಮಕ್ಕಳು ಈಗಿನ ಲೋಕಸಭಾ ಚುನಾವಣೆ ಪ್ರಚಾರದಿಂದ ದೂರವಿರಲಿ. ನಾನು ಕೂಡಾ ನನ್ನ ಮಗನಪರ ಪ್ರಚಾರಕ್ಕೆ ಬರುವುದಿಲ್ಲ, ನೋಡೋಣ ಚುನಾವಣೆ ಎದುರಿಸೋಣ ಎಂದು ಬಂಗಾರಪ್ಪಗೆ ಮುಖ್ಯಮಂತ್ರಿ ಯಡಿಯೂರಪ್ಪ ಬಹಿರಂಗ ಸವಾಲೆಸೆದಿದ್ದಾರೆ.
ಕಾಂಗ್ರೆಸ್ ಮತ್ತು ದಳ ಚುನಾವಣಾ ಹೊಂದಾಣಿಕೆ ಮಾಡಿಕೊಂಡಿದೆ. ಬೆಂಗಳೂರು ದಕ್ಷಿಣ, ಮೈಸೂರು ಮತ್ತು ಗುಲ್ಬರ್ಗ ಕ್ಷೇತ್ರದಲ್ಲಿ ಜನತಾದಳ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕಾಂಗ್ರೆಸ್ ಗೆ ಪರೋಕ್ಷವಾಗಿ ಸಹಾಯ ಮಾಡುತ್ತಿದೆ. ಕಾಂಗ್ರೆಸ್ ಮತ್ತು ದಳ ಜಾತಿ ಆಧರಿಸಿ ಟಿಕೆಟ್ ನೀಡಿದೆ, ಎರಡೂ ಪಕ್ಷಗಳಿಗೆ ಜನ ಸರಿಯಾದ ಪಾಠ ಕಲಿಸಲಿದ್ದಾರೆ. ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಎಲ್ ಕೆ ಆಡ್ವಾಣಿ ಏಪ್ರಿಲ್ 7 ರಂದು ಒಂದು ದಿನದ ಭೇಟಿಗಾಗಿ ರಾಜ್ಯಕ್ಕೆ ಬರಲಿದ್ದಾರೆ. ಅಂದು ತುಮಕೂರು, ಚಿತ್ರದುರ್ಗ ಮತ್ತು ಬೆಳಗಾವಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿದರು.
(ದಟ್ಸ್
ಕನ್ನಡವಾರ್ತೆ)
ಒಂದೆರಡು
ದಿನಗಳಲ್ಲಿ
ಬಿಜೆಪಿ
3ನೇ
ಪಟ್ಟಿ
ಪ್ರಕಟ