ವಿರೋಧ ಪಕ್ಷಗಳಿಂದಲೇ ಚುನಾವಣಾ ಅಕ್ರಮ : ರೆಡ್ಡಿ

ಈ ಕುರಿತಾಗಿ ಬಿಜೆಪಿಯ ಬಳ್ಳಾರಿ ಘಟಕದ ಅಧ್ಯಕ್ಷ ಡಾ.ಎಸ್.ಜಿ.ವಿ. ಮಹಿಪಾಲ್ ಅವರು ಸಹಿ ಹಾಕಿರುವ ಮನವಿ ಪತ್ರವನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿದ್ಯಾಶಂಕರ್ ಅವರಿಗೆ ಜನಾರ್ದನ ರೆಡ್ಡಿ ಭಾನುವಾರ ನೀಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ರೆಡ್ಡಿ, ನಕಲಿ ಮತದಾನ ಮಾಡಿಸಲೆಂದು ಪಕ್ಕದ ಆಂಧ್ರಪ್ರದೇಶದಿಂದ ಜನರನ್ನು ಕಾಂಗ್ರೆಸ್ ಪಕ್ಷ ಕರೆತರುತ್ತಿದೆ, ಇದನ್ನು ತಡೆಯಬೇಕು ಎಂದರು.
ಚುನಾವಣೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಮುಕ್ತವಾಗಿ ನಡೆಸಬೇಕೆಂದ ಅವರು, ಚುನಾವಣೆಯಲ್ಲಿ ಸರ್ಕಾರಿ ಅಧಿಕಾರಿಗಳನ್ನು ಬಳಸುವುದಕ್ಕೆ ಬಿಜೆಪಿ ಯಾವತ್ತೂ ವಿರೋಧಿಸಿದೆ, ಈ ಕುರಿತಂತೆ ಇಡೀ ಬಳ್ಳಾರಿ ಜಿಲ್ಲಾಡಳಿತವನ್ನು ಆಯೋಗ ತರಾಟೆಗೆ ತೆಗೆದುಕೊಂಡರೆ ಸ್ವಾಗತಿಸುತ್ತೇನೆ ಎಂದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications