Get Updates
Get notified of breaking news, exclusive insights, and must-see stories!

ವಿರೋಧ ಪಕ್ಷಗಳಿಂದಲೇ ಚುನಾವಣಾ ಅಕ್ರಮ : ರೆಡ್ಡಿ

Janardhana Reddy submits a memorandum to Vidyashankar
ಬೆಂಗಳೂರು, ಮಾ. 30 : ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾ ದಳ ಪಕ್ಷಗಳೇ ಚುನಾವಣಾ ಅಕ್ರಮಗಳಲ್ಲಿ ನಿರತವಾಗಿದ್ದು, ಭಾರತೀಯ ಜನತಾ ಪಕ್ಷವನ್ನು ಅನವಶ್ಯಕವಾಗಿ ದೂರುತ್ತಿವೆ ಎಂದು ಪ್ರವಾಸೋದ್ಯಮ ಸಚಿವ ಜಿ. ಜನಾರ್ದನ ರೆಡ್ಡಿ ದೂರಿದ್ದಾರೆ.

ಈ ಕುರಿತಾಗಿ ಬಿಜೆಪಿಯ ಬಳ್ಳಾರಿ ಘಟಕದ ಅಧ್ಯಕ್ಷ ಡಾ.ಎಸ್.ಜಿ.ವಿ. ಮಹಿಪಾಲ್ ಅವರು ಸಹಿ ಹಾಕಿರುವ ಮನವಿ ಪತ್ರವನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿದ್ಯಾಶಂಕರ್ ಅವರಿಗೆ ಜನಾರ್ದನ ರೆಡ್ಡಿ ಭಾನುವಾರ ನೀಡಿದರು.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ರೆಡ್ಡಿ, ನಕಲಿ ಮತದಾನ ಮಾಡಿಸಲೆಂದು ಪಕ್ಕದ ಆಂಧ್ರಪ್ರದೇಶದಿಂದ ಜನರನ್ನು ಕಾಂಗ್ರೆಸ್ ಪಕ್ಷ ಕರೆತರುತ್ತಿದೆ, ಇದನ್ನು ತಡೆಯಬೇಕು ಎಂದರು.

ಚುನಾವಣೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಮುಕ್ತವಾಗಿ ನಡೆಸಬೇಕೆಂದ ಅವರು, ಚುನಾವಣೆಯಲ್ಲಿ ಸರ್ಕಾರಿ ಅಧಿಕಾರಿಗಳನ್ನು ಬಳಸುವುದಕ್ಕೆ ಬಿಜೆಪಿ ಯಾವತ್ತೂ ವಿರೋಧಿಸಿದೆ, ಈ ಕುರಿತಂತೆ ಇಡೀ ಬಳ್ಳಾರಿ ಜಿಲ್ಲಾಡಳಿತವನ್ನು ಆಯೋಗ ತರಾಟೆಗೆ ತೆಗೆದುಕೊಂಡರೆ ಸ್ವಾಗತಿಸುತ್ತೇನೆ ಎಂದರು.

(ದಟ್ಸ್ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+