ದೇವೇಗೌಡ ವಿರುದ್ಧ ಖೇಣಿ ಸ್ಪರ್ಧೆ ಇಲ್ಲ
ಬೆಂಗಳೂರು ಮಾ 30: ಜನತಾದಳ ವರಿಷ್ಠ ದೇವೇಗೌಡ ವಿರುದ್ದ ಸ್ಪರ್ಧಿಸುವುದಾಗಿ ಬಹಿರಂಗ ಹೇಳಿಕೆ ನೀಡಿದ್ದ ನೈಸ್ ಕಂಪನಿಯ ಅಶೋಕ್ ಖೇಣಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಕುಟುಂಬದವರ ಒತ್ತಾಯದ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ನೈಸ್
ಮುಖ್ಯಸ್ಥ
ಅಶೋಕ್
ಖೇಣಿ
ದೇವೇಗೌಡರ
ವಿರುದ್ದ
ಹಾಸನ
ಲೋಕಸಭೆ
ಕ್ಷೇತ್ರದಿಂದ
ಸ್ಪರ್ಧಿಸುವ
ಇಂಗಿತ
ವ್ಯಕ್ತಪಡಿಸಿದ್ದರು.
ಖೇಣಿ
ಯಾವ
ಕ್ಷೇತ್ರದಲ್ಲಿ
ಸ್ಪರ್ಧೆಗಿಳಿಯಲಿದ್ದಾರೆ
ಎಂದು
ಸ್ಪಷ್ಟಪಡಿಸಿದರೆ,
ಅದೇ
ಕ್ಷೇತ್ರದಲ್ಲಿ
ನಾನು
ಸ್ಪರ್ಧಿಸುವೆ
ಎಂದು
ಮಾಜಿ
ಪ್ರಧಾನಮಂತ್ರಿ
ದೇವೇಗೌಡ
ಮರು
ಸವಾಲು
ಹಾಕಿದ್ದನ್ನು
ಇಲ್ಲಿ
ಸ್ಮರಿಸಬಹುದು.
ಆದರೆ
ಜೆಡಿಎಸ್
ಸ್ಪರ್ಧಿಸುವ
ಪ್ರಮುಖ
ಕ್ಷೇತ್ರಗಳಲ್ಲಿ
ಪಕ್ಷೇತರ
ಅಭ್ಯರ್ಥಿಗಳನ್ನು
ನಿಲ್ಲಿಸುವುದು
ಹಾಗೂ
ಬಿಜೆಪಿ
ಅಭ್ಯರ್ಥಿಗಳಿಗೆ
ಬೆಂಬಲಿಸುವುದರ
ಮೂಲಕ
ಮತಗಳನ್ನು
ವಿಭಜಿಸುವ
ಕಾರ್ಯತಂತ್ರವನ್ನು
ಖೇಣಿ
ಹೂಡುತ್ತಿದ್ದಾರೆ
ಎಂಬ
ಗಾಳಿಸುದ್ದಿ
ಹರಡಿದೆ.
(ದಟ್ಸ್
ಕನ್ನಡ
ವಾರ್ತೆ)
ವಿಪಕ್ಷಗಳಿಂದಲೇ
ಚುನಾವಣಾ
ಅಕ್ರಮ
:
ರೆಡ್ಡಿ