Get Updates
Get notified of breaking news, exclusive insights, and must-see stories!

ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವರಂಗ ದಿನಾಚರಣೆ

ಬೆಂಗಳೂರು, ಮಾ 26: ಕರ್ನಾಟಕ ನಾಟಕ ಅಕಾಡೆಮಿಯು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮಾರ್ಚ್ 27 ರಂದು ಸಂಜೆ 6 ಗಂಟೆಗೆ ವಿಶ್ವರಂಗ ದಿನಾಚರಣೆಯನ್ನು ಹಮ್ಮಿಕೊಂಡಿದೆ.

ಈ ವಿಶ್ವರಂಗ ದಿನಾಚರಣೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ ಅವರು ಉದ್ಫಾಟಿಸಲಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಡಾ.ಬಿ.ವಿ. ರಾಜಾರಾಂ ಅವರು ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ನಟಿ ಆರುಂಧತಿನಾಗ್, ಮೈಸೂರಿನ ಹಿರಿಯ ರಂಗಕರ್ಮಿ ಶ್ರೀಕಂಠ ಗುಂಡಪ್ಪ ಅವರು ಪಾಲ್ಗೊಳ್ಳಲಿದ್ದಾರೆ.

ಈ ವಿಶ್ವ ದಿನಾಚರಣೆಯ ಅಂಗವಾಗಿ ಮಾರ್ಚ್ 27 ರಂದು ಪ್ರಮೋದ್ ಶಿಗ್ಗಾಂವ್ ನಿರ್ದೇಶನದ ನನಗ್ಯಾಕೋ ಡೌಟ್, ಮಾರ್ಚ್ 28 ರಂದು ಮೈಕೋ ಶಿವಶಂಕರ್ ನಿರ್ದೇಶನದ ಮಾಯೆ ಅಂದ್ರೆ ಮಾಯೆ, ಮಾರ್ಚ್ 29 ರಂದು ಎನ್. ನರಸಿಂಹಯ್ಯ ನಿರ್ದೇಶನದ ಶ್ರೀ ಕೃಷ್ಣ ಸಂಧಾನ ಹಾಗೂ ಮಾರ್ಚ್ 30 ರಂದು ಮಾಲತೇಶ್ ಬಡಿಗೇರ್ ಅವರ ನಿರ್ದೇಶನದ ಚೋರ ಚರಣದಾಸ ಎಂಬ ನಾಟಕಗಳು ಆಯಾ ದಿನದಂದು ಸಂಜೆ 6.00 ಗಂಟೆಗೆ ಪ್ರದರ್ಶನಗೊಳ್ಳಲಿವೆ.
ದಟ್ಸ್ ಕನ್ನಡ ಸಭೆ ಸಮಾರಂಭ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+