ಯುಪಿಎಗೆ 'ಕೈ' ಅಮ್ಮನಿಗೆ 'ಜೈ' ಅಂದ ಪಿಎಂಕೆ
ಚೆನ್ನೈ ಮಾ 26: ಯುಪಿಎ ಒಕ್ಕೂಟದ ಪ್ರಮುಖ ಅಂಗಪಕ್ಷವಾದ ಪಿಎಂಕೆ ಇಂದು ಅದರ ಜೊತೆಗಿನ ಮೈತ್ರಿ ಮುರಿದುಕೊಂಡಿದ್ದು ಜಯಲಲಿತಾ ಸಾರಥ್ಯದ ಎಐಎಡಿಎಂಕೆ ಜೊತೆ ಜಂಟಿಯಾಗಿ ಲೋಕಸಭಾ ಚುನಾವಣೆ ಎದುರಿಸಲು ನಿರ್ಧರಿಸಿದೆ. ಜಯಲಲಿತಾ ಪಿಎಂಕೆ ಗೆ ಏಳು ಲೋಕಸಭಾ ಕ್ಷೇತ್ರಗಳನ್ನು ಮತ್ತು ಮುಂದೆ ಒಂದು ರಾಜ್ಯಸಭಾ ಸ್ಥಾನವನ್ನು ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಇಂದು ಪಿಎಂಕೆ ಮುಖ್ಯಸ್ಥ ಎಸ್ ರಾಮದಾಸ್ ಅವರು ತಮ್ಮ ಪಕ್ಷದ ಪ್ರಮುಖರ ಜೊತೆಗಿನ ಮಾತುಕತೆಯ ನಂತರ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇಂದು ಸಂಜೆ ಚಹಾಕೂಟಕ್ಕೆ ಜಯಲಲಿತಾ ಎಂಡಿಎಂಕೆ ನಾಯಕ ವೈಕೋ ಮತ್ತು ಎಡಪಕ್ಷಗಳನ್ನು ಆಹ್ವಾನಿಸಿದ್ದಾರೆ. ಪಿಎಂಕೆ ಹಾಗೂ ಕಾಂಗ್ರೆಸ್ ನಡುವಿನ ಭಿನ್ನಮತವನ್ನು ಬಗೆಹರಿಸಲು ಕೇಂದ್ರ ಗೃಹಸಚಿವ ಚಿದಂಬರಂ ನಿನ್ನೆ ಪಿಎಂಕೆ ನಾಯಕರೊಂದಿಗೆ ನಡೆಸಿದ ಸಂಧಾನ ಮಾತುಕತೆ ಯಶಸ್ವಿಯಾಗಲಿಲ್ಲ.
ಕೇಂದ್ರ
ಸಚಿವರಿಬ್ಬರ
ರಾಜೀನಾಮೆ
?
ಮೈತ್ರಿ
ಮುರಿದುಬಿದ್ದ
ಹಿನ್ನಲೆಯಲ್ಲಿ
ಪಿಎಂಕೆ
ಸಂಸದರಾಗಿ
ಯುಪಿಎ
ಸಂಪುಟದಲ್ಲಿ
ಸಚಿವರಾಗಿರುವ
ಆರೋಗ್ಯ
ಸಚಿವ
ಅನ್ಬುಮಣಿ
ರಾಮದಾಸ್
ಮತ್ತು
ಕೇಂದ್ರ
ರೈಲ್ವೆ
ರಾಜ್ಯ
ಸಚಿವ
ವೇಲು
ಇಂದು
ತಮ್ಮ
ಸ್ಥಾನಕ್ಕೆ
ರಾಜೀನಾಮೆ
ನೀಡುವ
ಸಾಧ್ಯತೆ
ಇದೆ.
(ದಟ್ಸ್
ಕನ್ನಡವಾರ್ತೆ)