ಲೋಕಸಭಾ ಚುನಾವಣೆ, ಆಯುಕ್ತರಿಂದ ಸಿದ್ಧತೆ ಪರಿಶೀಲನೆ

ಈ ಸಂದರ್ಭದಲ್ಲಿ ಹಲವಾರು ದೂರುಗಳನ್ನು ಸ್ವೀಕರಿಸಿದ್ದು, ಪ್ರಮುಖವಾಗಿ ಮತಪಟ್ಟಿ ಪರಿಷ್ಕರಣೆ ಸಂಬಂಧವಾಗಿ ಹಾಗೂ ಬೋಗಸ್ ಮತದಾರರ ಕುರಿತಂತೆ ದೂರುಗಳು ಬಂದಿವೆ ಎಂದು ತಿಳಿಸಲಾಯಿತು. ರಾಜಕೀಯ ಪಕ್ಷಗಳ ಸಾರ್ವಜನಿಕ ಸಭೆಗಳಿಗೆ ಸಂಬಂಧಿಸಿದಂತೆ ಅನುಮತಿ ಪಡೆಯುವುದು ತಡವಾಗುತ್ತಿರುವ ಬಗ್ಗೆ ದೂರುಗಳೂ ಬಂದಿದ್ದು ಆ ಸಂಬಂಧ ಒಂದೇ ಸ್ಥಳದಲ್ಲಿ ಎಲ್ಲಾ ಅನುಮತಿಗಳನ್ನು ದೊರಕಿಸುವ ವ್ಯವಸ್ಥೆಯ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಮದ್ಯ ಮತ್ತು ಹಣದ ಹಂಚಿಕೆ ಸಂಬಂಧ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದು ಅದರಲ್ಲೂ ಮತದಾನ ನಡೆಯುವ 48 ಗಂಟೆಗಳ ಅವಧಿಯಲ್ಲಿ ಹೆಚ್ಚಿನ ಬಂದೋಬಸ್ತ್ ಬಗ್ಗೆ ಅಭಿಪ್ರಾಯ ಬಂದಿವೆ ಎಂದು ಅವರು ತಿಳಿಸಿದರು. ಹಿಂದೂ ಸಮಾಜೋತ್ಸವಗಳನ್ನು ಜರಗಿಸುವ ಬಗ್ಗೆ ಸಹ ದೂರುಗಳು ಬಂದಿದ್ದು, ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸೂಕ್ತ ಸೂಚನೆಗಳನ್ನು ನೀಡಲಾಗಿದೆ ಎಂದರು.
ಬಳ್ಳಾರಿ ಮತ್ತು ಇತರ ಪ್ರದೇಶಗಳಲ್ಲಿ ಇಬ್ಬರು ಅಧಿಕಾರಿಗಳ ಬಗ್ಗೆ ದೂರುಗಳು ಬಂದಿರುವುದು ಅಲ್ಲದೆ, ರಾತ್ರಿ ಹುಬ್ಬಳ್ಳಿಯಲ್ಲಿ ರಾತ್ರಿ 10 ಗಂಟೆಗೂ ಮೇಲ್ಪಟ್ಟು ಸಭೆಗಳು ನಡೆದ ಬಗ್ಗೆ ದೂರುಗಳಿದ್ದು, ಆ ಬಗ್ಗೆ ವಿವರವಾದ ವಿಚಾರಣೆ ಜರುಗಿಸಲು ಸೂಚನೆ ನೀಡಲಾಗಿದೆ ಎಂದರು.
ಬೆಂಗಳೂರು ಮಹಾನಗರಪಾಲಿಕೆಯಿಂದ ತುಂಡು ಕಾಮಗಾರಿಗಳನ್ನು ನೀಡಿದ್ದ ಬಗ್ಗೆ ದೂರು ಬಂದಿದ್ದು ಮುಖ್ಯ ಚುನಾವಣಾಧಿಕಾರಿಗೆ ಈ ಬಗ್ಗೆ ಅಗತ್ಯ ವಿಚಾರಣೆ ಜರುಗಿಸಲು ತಿಳಿಸಲಾಗಿದೆ. ಕರ್ನಾಟಕದಲ್ಲಿ ಎಪಿಕ್ ಕಾರ್ಡ್ ನೀಡಿಕೆ ಶೇಕಡಾವಾರು ಬಹಳ ಕಡಿಮೆಯಿದೆ ಎಂದು ತಿಳಿಸಿದ ಮುಖ್ಯ ಚುನಾವಣಾ ಆಯುಕ್ತರು ಮೈಕ್ರೋ ಅಬ್ಸರ್ವರ್ಗಳ ಸಂಖ್ಯೆಯನ್ನು ಅಂತಹ ಕಡೆ 25 ರಿಂದ ಶೇಕಡಾ 50 ರಷ್ಟು ಇರುವಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಹಾಗೂ ಬದಲಿ ದಾಖಲೆಗಳ ಆಧಾರದ ಮೇಲೆ ಮತದಾನಕ್ಕೆ ಅನುಮತಿ ನೀಡುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದರು.
ಚುನಾವಣಾ ಸಂಬಂಧದ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ತೀವ್ರ ನಿಗಾವಹಿಸಲಾಗಿದ್ದು ಈವರೆಗೆ 30 ಲಕ್ಷ ರೂ ಮದ್ಯ, 37 ಲಕ್ಷ ಮೌಲ್ಯದ ಇಲೆಕ್ಟ್ರಾನಿಕ್ ಮತ್ತಿತರ ವಸ್ತುಗಳು, 10 ಲಕ್ಷ ರೂ ನಗದು ಸೇರಿದಂತೆ ಒಟ್ಟಾರೆ 77 ಲಕ್ಷ ರೂ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications