Get Updates
Get notified of breaking news, exclusive insights, and must-see stories!

ಪೂನಂ ಮಹಾಜನ್ ಗೆ ಟಿಕೆಟ್ ನಿರಾಕರಿಸಿದ ಬಿಜೆಪಿ

Poonam Mahajan
ಮುಂಬೈ, ಮಾ. 25 : ಭಾರತೀಯ ಜನತಾ ಮುಂಚೂಣಿಗೆ ಬರಲು ಸಾಕಷ್ಟು ಶ್ರಮಿಸಿದ್ದ ಹಿರಿಯ ನಾಯಕ ದಿವಂಗತ ಪ್ರಮೋದ್ ಮಹಾಜನ್ ಅವರ ಮಗಳು ಪೂನಂ ಮಹಾಜನ್ ಗೆ ಲೋಕಸಭೆ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ನಿರಾಕರಿಸಿದೆ. ಮುಂಬೈ ಈಶಾನ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದ ಪೂನಂ ಅವರನ್ನು ನಿರ್ಲಕ್ಷಿಸಿರುವ ಪಕ್ಷದ ನಾಯಕರು, ಮಾಜಿ ಸಂಸದೆ ಕಿರಿತಿ ಸೋಮಯ್ಯ ಎಂಬುವವರಿಗೆ ಟಿಕೆಟ್ ನೀಡಿದೆ.

ಮಹಾರಾಷ್ಟ್ರ ಮಾಜಿ ಉಪಮುಖ್ಯಮಂತ್ರಿ ಗೋಪಿನಾಥ ಮುಂಡೆ ಹಾಗೂ ದಿವಂಗತ ಪ್ರಮೋದ್ ಮಹಾಜನ್ ಹತ್ತಿರ ಸಂಬಂಧಿಗಳು. ಮಹಾಜನ್ ಮಗಳು ಹಾಗೂ ತಮ್ಮ ಸೊಸೆಯಾಗಿರುವ ಪೂನಂ ಅವರಿಗೆ ಟಿಕೆಟ್ ಕೊಡಿಸಲು ಮುಂಡೆ ಭಾರಿ ಪ್ರಯತ್ನಪಟ್ಟಿದ್ದರು. ಆದರೆ, ಪಕ್ಷದ ಹೈಕಮಾಂಡ್ ಮುಂಡೆ ಅವರ ಬೇಡಿಕೆಯನ್ನು ಸಾರಾಸಗಟಾಗಿ ನಿರಾಕರಿಸಿದ್ದು, ಮಾಜಿ ಸಂಸದೆ ಕಿರಿತಿ ಸೋಮಯ್ಯ ಅವರಿಗೆ ಟಿಕೆಟ್ ನೀಡಿದೆ. ಇದು ಮಹಾಜನ್ ಅಭಿಮಾನಿಗಳಿಗೆ ತೀವ್ರ ಬೇಸರದ ಸಂಗತಿಯಾಗಿದೆ.

ಕಳೆದ ವರ್ಷ ಪ್ರಮೋದ್ ಮಹಾಜನ್ ಪತ್ನಿ ರೇಖಾ ಮಹಾಜನ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿಸಲು ಬಿಜೆಪಿ ಮುಖಂಡರು ನಿರಾಕರಿಸಿದ್ದರು. ಪೂನಂ ಅವರ ಆಯ್ಕೆ ಮುಂಬೈ ದಕ್ಷಿಣ ಲೋಕಸಭೆ ಕ್ಷೇತ್ರ ಆಗಿತ್ತು. ಆದರೆ, ಈ ಕ್ಷೇತ್ರ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಶಿವಸೇನೆಗೆ ಕ್ಷೇತ್ರವನ್ನು ಬಿಟ್ಟುಕೊಡಬೇಕಾಯಿತು. ಅನಿವಾರ್ಯವಾಗಿ ಮುಂಬೈ ಈಶಾನ್ಯದ ಮೇಲೆ ಪೂನಂ ಕಣ್ಣು ಹಾಕಿದ್ದರು. ಆದರೆ, ಅಲ್ಲಿ ಮಾಜಿ ಸಂಸದೆ ಕಿರಿತಿ ಸೋಮಯ್ಯ ಅವರಿಗೆ ನೀಡಬೇಕು ಎಂದು ಹೈಕಮಾಂಡ್ ಮೊದಲೇ ನಿರ್ಧರಿಸಿತ್ತು. ಸೋಮಯ್ಯ ಅವರು ಸುಮಾರು 20 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+