ಆರ್ಎಸ್ಎಸ್ ಪದಾಧಿಕಾರಿಯಾಗಿ ಹೊಸಬಾಳೆ
ನಾಗಪುರ್, ಮಾ. 23 : ರಾಷ್ಟ್ರೀಯ ಸ್ವಯಂ ಸೇವಕ ಸರ ಸಂಘ ಸಂಚಾಲಕರಾಗಿ ಮೋಹನ್ ಭಾಗವತ್ ಆಯ್ಕೆಯಾದ ಬೆನ್ನಲ್ಲೇ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆಯಾಗಿದ್ದು, ಕರ್ನಾಟಕದ ದತ್ತಾತ್ರೇಯ ಹೊಸಬಾಳೆ ಮೂರು ವರ್ಷ ಅವಧಿಗೆ ಸಹ ಸರಕಾರ್ಯವಾಹಕರಾಗಿ ಆಯ್ಕೆಯಾಗಿದ್ದಾರೆ.
ನಾಗಪುರದಲ್ಲಿ ನಡೆದ ಪ್ರತಿನಿಧಿ ಸಭಾದ ಸಮರೋಪ ಸಮಾರಂಭ ದಿನದಂದು ಪದಾಧಿಕಾರಿಗಳನ್ನು ನೇಮಿಸಲಾಯಿತು. ಆರ್ಎಸ್ಎಸ್ ನಲ್ಲಿ ಸಹಬೌದ್ಧಿಕ ಪ್ರಮುಖರಾಗಿದ್ದ ದತ್ತಾತ್ತೇಯ ಹೊಸಬಾಳೆ ಅವರಿಗೆ ಈಗ ಹೊಸ ಜವಾಬ್ದಾರಿ ವಹಿಸಲಾಗಿದೆ. 1968ರಲ್ಲಿ ಸಂಘ ಸೇವೆಗೆ ಧುಮುಕಿದ ದತ್ತಾತ್ತೇಯ (54) ಎಬಿವಿಪಿಯಲ್ಲೂ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದರು. ದಾ ಮ ರವಿಂದ್ರ ಕ್ಷೇತ್ರ ಪ್ರಚಾರಕ ಪ್ರಮುಖರಾಗಿ ಆಯ್ಕೆಯಾಗಿದ್ದು, ಅವರು ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಹುಬ್ಬಳ್ಳಿಯ ಮಂಗೇಶ್ ಭೇಂಡೆ ಅವರು ಕ್ಷೇತ್ರಿಯ ಪ್ರಚಾರಕರಾಗಿ ನೇಮಕಗೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಆರ್ ಎಸ್ ಎಸ್ ಅಧ್ಯಕ್ಷ ಸುದರ್ಶನ್ ರಾಜಿನಾಮೆ












Click it and Unblock the Notifications