ನನ್ನ ತಪ್ಪು ಮನ್ನಿಸಿ, ಸಂಜಯ ಪಾಟೀಲ್
ಬೆಂಗಳೂರು, ಮಾ. 22 : ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಕನ್ನಡ ಧ್ವಜ ಹಾರಿಸಲು ನಾನೇ ಮುಂದಾಗುತ್ತೇನೆ. ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಕನ್ನಡ ಧ್ವಜ ಹಾರಿಸಲು ವಿರೋಧಿ ವ್ಯಕ್ತಪಡಿಸಿದ ಬೆಳಗಾವಿ ಗ್ರಾಮಾಂತರ ಶಾಸಕ ಸಂಜಯ್ ಪಾಟೀಲ್ ಅವರ ಮಾತಿದು.
ಎಂಇಎಸ್ ಬೆಂಬಲಿಸಿದ್ದನ್ನು ಖಂಡಿಸಿ ಗೋಕಾಕನಲ್ಲಿ ಕರವೇ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪಾಟೀಲ್ ಈ ಉತ್ತರ ನೀಡಿದರು. ನಾನು ಕನ್ನಡಪರ ಅಭ್ಯರ್ಥಿಯಾಗಿ ವಿಧಾನಸಭೆ ಸ್ಪರ್ಧಿಸಿ ಆಯ್ಕೆಯಾಗಿದ್ದೇನೆ. ಕನ್ನಡಾಂಬೆಯ ಸೇವೆ ಮಾಡಲು ಸದಾ ಸಿದ್ಧನಿದ್ದೇನೆ, ನನ್ನ ಬಗ್ಗೆ ಅಪ್ರಪಚಾರ ಮಾಡಲಾಗಿದೆ. ಹಾಗಾಗಿ ನನ್ನನ್ನು ಕ್ಷಮಿಸಿ ಎಂದು ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಕನ್ನಡಿಗರ ಕ್ಷಮೆಯಾಚಿಸಿದ ಅಂಗಡಿ, ಪಾಟೀಲ್












Click it and Unblock the Notifications