ಕಂದಮಾಲ್ ನಲ್ಲಿ ಆರ್ ಎಸ್ ಎಸ್ ನಾಯಕನ ಹತ್ಯೆ
ಭುವನೇಶ್ವರ, ಮಾ. 19 : ಕಳೆದ ವರ್ಷ ಕಂದಮಾಲ್ ನಲ್ಲಿ ನಡೆದಿದ್ದ ಕ್ರೈಸ್ತ ವಿರೋಧಿ ಗಲಭೆಯಲ್ಲಿ ಬಂಧಿತರಾಗಿದ್ದ ಸ್ಥಳೀಯ ಆರ್ ಎಸ್ ಎಸ್ ನಾಯಕ ಪ್ರಭಾತ್ ಪಾಣಿಗ್ರಾಹಿ ಅವರನ್ನು ಶಂಕಿತ ಮಾವೋವಾದಿ ಗುರುವಾರ ಬೆಳಗ್ಗೆ ಕಂಧಮಾಲ್ ನಲ್ಲಿ ಗುಂಡಿಟ್ಟು ಹತ್ಯೆಗೈದಿದ್ದಾರೆ. ಘಟನೆ ನಂತರ ಯಾವುದೇ ಪ್ರತಿಭಟನೆಯಂತಹ ಘಟನೆಗಳು ವರದಿಯಾಗಿಲ್ಲ. ಆದರೆ, ಘಟನೆ ತಿಳಿಯುತ್ತಿದ್ದಂತೆಯೇ ವ್ಯಾಪಕ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.
ಕಳೆದ ವರ್ಷ ಕೋಮುಗಲಭೆಯಿಂದ ತತ್ತರಿಸಿ ಹೋಗಿದ್ದ ಕಂದಮಾಲ್ ನಿನ್ನೆ ಮತ್ತೆ ಶಾಂತಿ ಕದಡುವ ಇಂತಹ ಹೇಯ ಕೃತ್ಯಕ್ಕೆ ಸಾಕ್ಷಿಯಾಗಿದೆ. ನಿನ್ನೆ ಬೆಳಗಿನ ಜಾವ ಸುಮಾರು 15 ಜನ ಇದ್ದ ಶಸ್ತ್ರಸಜ್ಜಿತ ಮಾವೋವಾದಿಗಳು ತಂಡ, ಪಾಣಿಗ್ರಾಹಿ ಅವರು ಇರುವ ರೂಡಿಗುಮ ಹಳ್ಳಿಗೆ ತೆರಳಿ ಅವರ ಮೇಲೆ ಮನಸೋ ಇಚ್ಚೆ ದಾಳಿ ನಡೆಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪಾಣಿಗ್ರಾಹಿಯವರು ಆರ್ ಎಸ್ ಎಸ್ ಕಾರ್ಯಕರ್ತರೊಬ್ಬರ ಮನೆಯಲ್ಲಿ ವಾಸವಾಗಿದ್ದರು.
ವಿಶ್ವ ಹಿಂದೂ ಪರಿಷತ್ ಮುಖಂಡ ಸ್ವಾಮಿ ಲಕ್ಷಣಾನಂದ ಸರಸ್ವತಿ ಹತ್ಯೆಗೆ ಸಂಬಂಧಿಸಿದಂತೆ ಕಂದಮಾಲ್ ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಕೋಮು ಗಲಭೆ ನಡೆದಿತ್ತು. ಕ್ರೈಸ್ತ ಸನ್ಯಾಸಿನಿ ಒಬ್ಬರನ್ನು ಡಜೀವಂತ ದಹನ ಸೇರಿದಂತೆ ಅನೇಕ ಕ್ರೈಸ್ತಪರ ಸಮುದಾಯದ ಮೇಲೆ ಹಿಂದು ಪರ ಸಂಘಟನೆಗಳು ದಾಳಿ ನಡೆಸಿದ್ದವು. ಘಟನೆ ಸಂಬಂಧಿಸಿದಂತೆ ಆರ್ಎಸ್ಎಸ್ ನಾಯಕ ಪಾಣಿಗ್ರಾಹಿ ಅವರನ್ನು ಬಂಧಿಸಲಾಗಿತ್ತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications