ರಾಜನಾಥ್ ನಿವಾಸಕ್ಕೆ ಜೈಟ್ಲಿ ದಿಢೀರ್ ಭೇಟಿ

ಸುಧಾಂಶು ಮಿತ್ತಲ್ ಈಶಾನ್ಯ ರಾಜ್ಯಗಳ ಸಂಘಟಕರಾಗಿ ನೇಮಕಗೊಂಡಿರುವುದು ಅರುಣ್ ಜೈಟ್ಲಿ ಅವರಿಗೆ ಎಳ್ಳಷ್ಟು ಇಷ್ಟವಿಲ್ಲ. ಇದರಿಂದ ಬೇಸರಗೊಂಡಿದ್ದ ಅವರು ಪಕ್ಷ ಚುನಾವಣೆ ಸಮಿತಿ ಸಭೆಗೆ ಗೈರು ಹಾಜರಾಗಿದ್ದರು. ಆದರೆ, ಜೈಟ್ಲಿ ಅವರಿಗೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದರೂ ಅವರು ಗೈರು ಹಾಜರಾಗಿದ್ದರು. ಇದರಿಂದ ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ಬಿರುಕು ಉಂಟಾಗಿತ್ತು.
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಈ ದಿನಗಳಲ್ಲಿ ಮುನಿಸು ಸರಿಯಲ್ಲ. ಇದರಿಂದ ಪಕ್ಷದ ಕಾರ್ಯಕರ್ತರಿದೆ ತಪ್ಪು ಸಂದೇಶ ರವಾನೆಯಾಗತ್ತದೆ ಎಂದು ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ಜೈಟ್ಲಿಗೆ ಕಿವಿ ಮಾತು ಹೇಳಿದ್ದರು. ಆದರೂ ಕೂಡಾ ಚುನಾವಣೆ ಸಮಿತಿಗೆ ಸಭೆ ಗೈರಾಗಿದ್ದುದು, ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಸಮಸ್ಯೆಗಳಿದ್ದರೆ ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಳ್ಳಬೇಕು ಎಂದು ಅಡ್ವಾಣಿ ತುಸು ಕೋಪದಿಂದಲೇ ಆಪ್ತರ ಬಳಿ ಗುಡುಗಿದ್ದರು
(ದಟ್ಸ್ ಕನ್ನಡ ವಾರ್ತೆ)
ತಣ್ಣಗಾಗದ ಜೈಟ್ಲಿ ಮುನಿಸು, ಸಭೆ ಗೈರು











Click it and Unblock the Notifications