ದಾಖಲೆ ಪ್ರಮಾಣದಲ್ಲಿ ಹಣದುಬ್ಬರ ಇಳಿಕೆ
ನವದೆಹಲಿ, ಮಾ. 19 : ಭಾರತದ ಹಣದುಬ್ಬರದ ಪ್ರಮಾಣ ಭಾರಿ ಪ್ರಮಾಣದ ಕುಸಿತಕ್ಕೆ ಕಂಡು ಶೂನ್ಯಕ್ಕೆ ಬಂದು ನಿಂತಿದೆ. ಕಳೆದ ಮಾರ್ಚ್ 7 ರ ಅಂಕಿ ಅಂಶಗಳ ಪ್ರಕಾರ ಹಣದುಬ್ಬರದ ಪ್ರಮಾಣ 2.43 ಕ್ಕೆ ಇಳಿದಿತ್ತು. ಆದರೆ, ಮಾರ್ಚ್ 19ಕ್ಕೆ ಇದರ ಪ್ರಮಾಣ 0.44 ಕ್ಕೆ ಇಳಿದಿದೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಹಣದುಬ್ಬರ ಪಾತಾಳ ಕಾಣಲು ಕಾರಣವಾಗಿದೆ. ಹಣದ ಸರಬರಾಜು ಕೊರತೆ ಇದಕ್ಕೆ ಕಾರಣವಾಗಿದೆ. ಉತ್ಪಾದನೆಗಳ ಬೇಡಿಕೆ ಕೊರತೆ, ರಫ್ತು ಪ್ರಮಾಣದಲ್ಲಿ ಗಮನಾರ್ಹ ಹುಣದುಬ್ಬರ ಇಳಿಕೆ ಪ್ರಮುಖ ಕಾರಣವಾಗಿದೆ. ಆಹಾರ ಪದಾರ್ಥ ಮತ್ತು ಇಂಧಗಳ ಬೆಲೆಗಳು ಕುಸಿತ ಕಂಡಿರುವುದು ಕೂಡ ಹಣದುಬ್ಬರ ಇಳಿಕೆ ಮೂಲ ಕಾರಣವಾಗಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ ಮಾಡಲಾಗಿದೆ. ಆಹಾರ ಪದಾರ್ಥಗಳಲ್ಲಿ ಕೂಡಾ ಭಾರಿ ಕುಸಿತ ಕಂಡಿರುವುದು ತಿಳಿದಿರುವ ಸಂಗತಿ. ಟೀ, ಹಣ್ಣುಗಳು, ತರಕಾರಿ ಬೇಳೆಗಳ ದರಗಳು ಕಡಿಮೆಯಾಗಿವೆ. ಅಕ್ಕಿ ಮತ್ತು ಗೋಧಿ ದರಗಳು ಮಾತ್ರ ಇಳಿಕೆ ಕಂಡಿಲ್ಲ. ಹಣದುಬ್ಬರ ಇಳಿಕೆ ಸರಿಯಲ್ಲ. ಇದರಿಂದ ನೂರೆಂಟು ಸಮಸ್ಯೆಗಳು ಎದುರಾಗುತ್ತವೆ.
ಉತ್ಪಾದನೆ ಕೊರೆತೆ, ಮಾರಾಟ ಇಲ್ಲದಿರುವುದು. ಹಣದ ಸರಬರಾಜು ಕಡಿಮೆ. ಈ ಎಲ್ಲ ಅಂಶಗಳಿಂದ ನಿರುದ್ಯೋಗ ಸೃಷ್ಟಿಯಾಗುತ್ತದೆ. ಇದು ದೇಶದ ಆರ್ಥಿಕತೆ ಮೇಲೆ ಪೆಟ್ಟು ಬೀಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎನ್ನುತ್ತಾರೆ ಆರ್ಥಿಕ ತಜ್ಞ ವಿದ್ಯಾಶಂಕರ್. 2008ರಲ್ಲಿ ಈ ದಿನದಲ್ಲಿ ಹಣದುಬ್ಬರ ಪ್ರಮಾಣ 7.78 ಇತ್ತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications