ಅಂಬರೀಷ್ ಜೆಡಿಎಸ್ ಸೇರ್ಪಡೆ ಸಾಧ್ಯತೆ

ಕಾಂಗ್ರೆಸ್ ಮುಖಂಡರ ನಾಯಕರ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದ ಅಂಬರೀಷ್ ಇತ್ತೀಚೆಗೆ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದರು. ಅಲ್ಲದೇ, ಸಂಸದೆ ತೇಜಸ್ವಿನಿ ಅವರು ಅಂಬರೀಷ್, ಅವರನ್ನು ಭೇಟಿ ಕಾಂಗ್ರೆಸ್ ತೊರೆಯದಂತೆ ಮನವಿ ಮಾಡಿಕೊಂಡಿದ್ದರು. ಆಗ ಅಂಬರೀಷ್ ಸ್ಪಷ್ಟ ಉತ್ತರ ನೀಡಿರಲಿಲ್ಲ. ಅಭ್ಯರ್ಥಿಗಳ ಕೊರತೆ ಎದುರಿಸುತ್ತಿರುವ ಜೆಡಿಎಸ್ ಅನ್ಯ ಪಕ್ಷಗಳಲ್ಲಿರುವ ಅತೃಪ್ತರಿಗೆ ಗಾಳ ಹಾಕಿದ್ದು, ಈಗಾಗಲೇ ಬಿಜೆಪಿಯಲ್ಲಿ ಬಂಡಾಯದ ಬಾವುಟ ಹಾರಿಸಿರುವ ಸಂಸದ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷಕ್ಕೆ ಸಳೆದುಕೊಳ್ಳಲು ಕುಮಾರಸ್ವಾಮಿ ಭಾರಿ ಯತ್ನ ನಡೆಸಿದ್ದಾರೆ. ಬೀದರ್ ನಲ್ಲಿ ಸುಭಾಷ್ ನೇಳಗಿ ಅವರನ್ನು ಸೆಳೆದುಕೊಂಡಿದ್ದು, ಲೋಕಸಭೆ ಚುನಾವಣೆಗೆ ಕಣಕ್ಕಿಳಿಸಲು ನಿರ್ಧರಿಸಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಅಂಬರೀಷ ನನ್ನ ಹಳೆಯ ಸ್ನೇಹಿತರು, ಅಲ್ಲದೆ ಅವರು ತಮ್ಮರಾಜಕೀಯ ಜೀವನವನ್ನು ಜೆಡಿಎಸ್ ಪಕ್ಷದಿಂದಲೇ ಆರಂಭಿಸಿದ್ದಾರೆ. ಆದ್ದರಿಂದ ಅವರು ಸ್ವಂತ ಮನೆಗೆ ಬರಬಹುದು ಎಂಬ ಅಶಾವಾದವನ್ನು ವ್ಯಕ್ತಪಡಿಸಿದರು. ಅಂಬರೀಷ್ ಅವರನ್ನು ಬೆಂಗಳೂರು ದಕ್ಷಿಣ ಇಲ್ಲವೇ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಅಖಾಡಕ್ಕಿಳಿಸಲು ಜೆಡಿಎಸ್ ಚಿಂತನೆ ನಡೆಸಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications