ಮೂರು ದಿನದಲ್ಲಿ ಪೋಟಾ ಕಾಯ್ದೆ ಜಾರಿ, ಬಿಜೆಪಿ

ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜಕೀಯ ದುರುದ್ದೇಶದಿಂದ ಯುಪಿಎ ಸರ್ಕಾರ ಪೋಟಾ ಕಾಯ್ದೆಯನ್ನು ರದ್ದುಗೊಳಿಸಿತು ಎಂದು ಆರೋಪಿಸಿದರು. ಯಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಒಂದೇ ವಾರದಲ್ಲಿ ಪೋಟಾ ಕಾಯ್ದೆಯನ್ನು ರದ್ದುಪಡಿಸಿತು ಏಕೆ ಎಂದು ಪ್ರಶ್ನಿಸಿದ ಅವರು, ದೇಶ ರಕ್ಷಣೆಗಿಂತ ಮೀಗಿಲಾಗಿದ್ದು ಇನ್ನೇನಿದೆ ಎಂದು ಕಿಡಿಕಾರಿದರು. ಕೆಲ ರಾಜಕೀಯ ಮುಖಂಡರು ಪೋಟಾ ಕಾಯ್ದೆಯನ್ನು ದುರ್ಬಳಿಕೆ ಮಾಡಿಕೊಂಡರು ಎನ್ನುವ ನೆಪದಿಂದ ಕಾಯ್ದೆಯನ್ನೇ ರದ್ದು ಮಾಡಿದರು. ಇದರಿಂದ ಭಾರತೀಯರಿಗೆ ಆಗಿರುವ ನಷ್ಟ ಅಷ್ಟಿಷ್ಟಲ್ಲ. ಭಯೋತ್ಪಾದಕರ ಅಟ್ಟಹಾಸಕ್ಕೆ ನೂರಾರು ಅಮಾಯಕ ಭಾರತೀಯರನ್ನು ಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಯಿತು. ಇದರ ಹೊಣೆಯನ್ನು ಯುಪಿಎ ಸರ್ಕಾರವೇ ಹೊರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂಬೈ ಘಟನೆ ಸೇರಿದಂತೆ ದೇಶದ ವಿವಿಧ ಭಾಗಗಳ ಪ್ರಮುಖ ನಗರಗಳಲ್ಲಿ ಭಯೋತ್ಪಾದನೆ ಕೃತ್ಯ ನಡೆದಿವೆ. ಆದನ್ನು ತಡೆಯುವಲ್ಲಿ ಯುಪಿಎ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದ ಅವರು, ದೇಶದ ರಕ್ಷಣೆಗೆ ಪೋಟಾ ರದ್ದು ಮಾಡಿದ ಇನ್ನೊಂದು ಬಿಗಿಯಾದ ಕಾನೂನು ತರಲು ಸರ್ಕಾರ ಹಿಂದೇಟು ಹಾಕಿತು. ಇದು ಮತಗಳಿಕೆ ತಂತ್ರವಲ್ಲದೆ ಮತ್ತೇನೂ ಎಂದು ಧನಂಜಯ್ ಕುಮಾರ್ ತೀವ್ರ ವಾಗ್ದಾಳಿ ನಡೆಸಿದರು. ಯುಪಿಎ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಪಲವಾಗಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿಕೊಂಡರು.
(ದಟ್ಸ್ ಕನ್ನಡ ವಾರ್ತೆ)
ಬಿಜೆಪಿಯಲ್ಲಿ ಎದ್ದಿದ್ದ ಬೆಂಕಿ ಶಮನಗೊಳಿಸಿದೆ ಸಿಎಂ











Click it and Unblock the Notifications