ಬ್ಯಾಂಕಿನಿಂದ ಹೆಚ್ಚು ಹಣ ತೆಗೆದರೆ ತಿಳಿಸಿ : ಡಿಸಿ
ಮೈಸೂರು, ಮಾ. 13 : ಮೈಸೂರು ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ವ್ಯಾಪ್ತಿಯಲ್ಲಿ ಬರುವ ಬ್ಯಾಂಕ್ಗಳಿಂದ ಹೆಚ್ಚು ಹಣವನ್ನು ಚುನಾವಣೆ ವೇಳೆ ತೆಗೆಯುವವರ ಬಗ್ಗೆ ವಿವರಗಳನ್ನು ದಾಖಲಿಸುವಂತೆ ಮೈಸೂರು ಜಿಲ್ಲಾ ಚುನಾವಣಾಧಿಕಾರಿಗಳು ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿಗಳ ಕೇಂದ್ರ ಸ್ಥಾನಿಕ ಸಹಾಯಕ ಡಾ ಸಿ.ಜಿ. ಬೆಟ್ಟಸೂರಮಠ ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೈಸೂರಿನಲ್ಲಿರುವ ಎಲ್ಲ ಬ್ಯಾಂಕ್ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಒಮ್ಮೆಲೆ ಮೂವತ್ತು ಸಾವಿರ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಬ್ಯಾಂಕ್ಗಳಿಂದ ತೆಗೆಯುವವರ ಪೂರ್ಣ ವಿವರಗಳನ್ನು ದಾಖಲಿಸುವ ಮೂಲಕ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಜರುಗಿಸಲು ಅವರು ಬ್ಯಾಂಕ್ ಅಧಿಕಾರಿಗಳಲ್ಲಿ ವಿನಂತಿಸಿದರು.
ಇವುಗಳಲ್ಲದೆ ಸಾಲ ಮರುಪಾವತಿಗಳ ಬಗ್ಗೆಯೂ ಎಚ್ಚರ ವಹಿಸಿ ಯಾವುದೇ ಅಕ್ರಮಗಳು ಉಂಟಾಗದಂತೆ ಕ್ರಮ ಕೈಗೊಳ್ಳುವ ಸೂಚನೆಯನ್ನು ಬೆಟ್ಟಸೂರಮಠ ನೀಡಿದರು. ಸಭೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತರು ಹಾಗೂ ನಗರದ ಎಲ್ಲ ಬ್ಯಾಂಕ್ಗಳ ಮುಖ್ಯಸ್ಥರು, ಚುನಾವಣಾ ತಹಸೀಲ್ದಾರ್ ಪ್ರಕಾಶ್ ಗೆಜ್ಜಿ ಪಾಲ್ಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)
ಅಕ್ರಮ ಮದ್ಯ ಸರಬರಾಜು ತಡೆಯಿರಿ: ಮೈಸೂರು ಡಿಸಿ
ಪೆಟ್ರೋಲ್ ಬಂಕ್ ಲೆಕ್ಕ ಪುಸ್ತಕದ ಮೇಲೆ ಡಿಸಿ ಕಣ್ಣು











Click it and Unblock the Notifications