ಆಂತರಿಕ ಭದ್ರತಾ ವಿಷಯ; ಚಿದು, ಸಿಎಂ ಕಿರಿಕ್

ರಂದು ಮುಂದೂಡುವಂತೆ ಕೇಳಿಕೊಂಡಿತ್ತು. ಆದರೆ ಈ ಸಭೆಗೆ ಎರಡುದಿನ ಮುನ್ನ ಮತ್ತೆ ಈ ದಿನಾಂಕ ಮುಖ್ಯಮಂತ್ರಿಗಳಿಗೆ ಬಿಡುವಿಲ್ಲ ಎಂದು ಮಾರ್ಚ್ 7 ಕ್ಕೆ ಮುಂದೂಡಲ್ಪಟ್ಟಿತ್ತು.
ಶನಿವಾರ ಬೆಳಿಗ್ಗೆ 8.15 ರಿಂದ 10.15 ರ ವರೆಗೆ ಸಭೆ ನಡೆಯಬೇಕಿತ್ತು. ಕೇಂದ್ರ ಗೃಹ ಸಚಿವ ಚಿದಂಬರಂ ಈ ಸಭೆಯಲ್ಲಿ ಭಾಗವಹಿಸಲು ಮುಂಬೈನಿಂದ ಬೆಂಗಳೂರಿಗೆ ಹೊರಡುವ ಸ್ವಲ್ಪ ಸಮಯದ ಮುಂಚೆ, ಮತ್ತೆ ಯಡಿಯೂರಪ್ಪ ತಮ್ಮ ಸ್ವಕ್ಷೇತ್ರಕ್ಕೆ ಧಾವಿಸಿದ್ದಾರೆ ಎನ್ನುವ ಮಾಹಿತಿ ಚಿದಂಬರಂಗೆ ಬಂತು. ಈ ಮಾಹಿತಿ ಬರುತ್ತಿದ್ದಂತೆ ಬೇಸರಗೊಂಡ ಚಿದು ತಮ್ಮ ಪ್ರವಾಸವನ್ನು
ಮೊಟಕುಗೊಳಿಸಿ ದೆಹಲಿಗೆ ವಾಪಾಸಾದರು.
ರಾಜ್ಯದ ವರ್ತನೆಯಿಂದ ಕುದಿಯುತ್ತಿರುವ ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿ, ಭದ್ರತೆ ಕುರಿತು ಸಭೆಯನ್ನು ಹೀಗೆ ಹಠತ್ತಾನೆ ರದ್ದು ಮಾಡುವ ಅಥವಾ ಮುಂದೂಡುವ ರಾಜ್ಯದ ವರ್ತನೆ ಇದೇ ಮೊದಲೇನಲ್ಲ. ಹೀಗಾಗುತ್ತಿರುವುದು ಇದು ಮೂರನೇ ಬಾರಿ ಎಂದು ಹೇಳಿದೆ. ಗೃಹ ಸಚಿವ ಚಿದಂಬರಂ ಯಡಿಯೂರಪ್ಪ ಒಬ್ಬ ಜವಾಬ್ದಾರಿ ಇಲ್ಲದ
ಮನುಷ್ಯ ಎಂದು ಜರಿದಿದ್ದಾರೆ.
ರಾಜ್ಯ ಗೃಹ ಸಚಿವ ವಿ ಎಸ್ ಆಚಾರ್ಯ ಈ ಬಗ್ಗೆ ಮಾತನಾಡುತ್ತಾ, ಕೇಂದ್ರ ಸರಕಾರಕ್ಕೆ ಸಭೆ ನಡೆಸಲು ನಿಜಕ್ಕೂ ಮನಸ್ಸಿಲ್ಲ. ಒಂದಲ್ಲ ಒಂದು ನೆಪ ಒಡ್ಡಿ ಸಭೆಯನ್ನು ಮುಂದೂಡುತ್ತಿದ್ದಾರೆ. ಚುನಾವಣಣಾ ಸಮಯದಲ್ಲಿ ಇದರಲ್ಲೂ ಕೇಂದ್ರ ರಾಜಕೀಯ ಮಾಡುವುದಕ್ಕೆ ಹೊರಟಿರುವುದು ವಿಷಾದನೀಯ. ನಮ್ಮ ಬೇಡಿಕೆಯಾದ ಬೆಂಗಳೂರಿಗೆ ಎನ್ ಎಸ್ ಜಿ ಘಟಕವನ್ನು
ನೀಡಿಲ್ಲ. ಮುಖ್ಯಮಂತ್ರಿ ಇಲ್ಲದಿದ್ದರೇನು, ಭದ್ರತೆ ಬಗ್ಗೆ ಸಭೆ ನಡೆಸಲು ನಾನು ಇಲ್ವೇ? ಎಂದು ಕೇಂದ್ರ ಗೃಹ ಖಾತೆಯನ್ನು ದೂರಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications