ಎಲ್ ಟಿಟಿಇ ದಂಡನಾಯಕನಾಗಿ ಪ್ರಭಾಕರನ್ ಪುತ್ರ ?
ಕೊಲಂಬೋ, ಫೆ. 16 : ದಶಕಗಳ ತಮಿಳು ಟೈಗರ್ ಗಳ ಜೊತೆಗಿನ ಯುದ್ದ ಇನ್ನೇನು ಕೊನೆಗಾಣುತ್ತಿದೆ ಎನ್ನುತ್ತಿರುವಾಗಲೇ ಶ್ರೀಲಂಕಾ ಸರ್ಕಾರ ಮಹತ್ವದ ಸುದ್ದಿಯೊಂದನ್ನು ಬಹಿರಂಗಪಡಿಸಿದೆ. ಎಲ್ ಟಿಟಿಇ ತಮಿಳು ಭಯೋತ್ಪಾದಕ ಪಡೆಯನ್ನು ಮುನ್ನೆಡೆಸುತ್ತಿದ್ದ ವೇಲುಪಿಳ್ಳೈ ಪ್ರಭಾಕರನ್ ಸರ್ಕಾರದ ಜೊತೆಗಿನ ಹೋರಾಟದ ಮುಖಂಡತ್ವವನ್ನು ತನ್ನ ಮಗ ಚಾರ್ಲ್ಸ್ ಆ೦ಥೋನಿಗೆ ವಹಿಸಿದ್ದಾನೆ ಎನ್ನುವ ಸುದ್ದಿ ತನಿಖೆಯಿಂದ ದೃಢಪಟ್ಟಿದೆ.
ಇಂಜಿನಿಯರಿಂಗ್ ಪದವೀಧರನಾಗಿರುವ ಆ೦ತೋನಿ 2006 ರಿಂದ ಎಲ್ ಟಿ ಟಿ ಇ ವೈಮಾನಿಕ ಘಟಕ ಹಾಗೂ ಕಂಪ್ಯೂಟರ್ ಯೂನಿಟ್ ನೇತೃತ್ವ ವಹಿಸಿಕೊ೦ಡಿದ್ದಾನೆ ಎಂದು ವರದಿ ತಿಳಿಸಿದೆ. ವೈಮಾನಿಕ ದಾಳಿಯನ್ನು ಇನ್ನಷ್ಟು ಚುರುಕುಗೊಳಿಸುವುದು ಈತನ ಮುಖ್ಯ ಉದ್ದೇಶ ಎಂದು ವಿಚಾರಣೆಯ ವೇಳೆ ಬಹಿರಂಗ ಪಟ್ಟಿದೆ. 2007ರ ಮಾರ್ಚ್ ತಿಂಗಳಲ್ಲಿ ಎಲ್ ಟಿಟಿಇ, ಶ್ರೀಲಂಕಾದ ಮಿಲಿಟರಿ ವೈಮಾನಿಕ ನೆಲೆಯ ಮೇಲೆ ದಾಳಿ ನಡೆಸಿ ತನ್ನ ಶಕ್ತಿಯನ್ನು ಪ್ರದರ್ಶಿಸುತ್ತಿತ್ತು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications