ಭಾನುವಾರ ಕಬ್ಬನ್ ಪಾರ್ಕಲ್ಲಿ ಬಿ ಜಯಶ್ರೀ ರಂಗಗೀತೆ

ಪ್ರಕೃತಿ ಸಂಸ್ಥೆಯ 20ನೇ ಕಾರ್ಯಕ್ರಮದಂದು ಪ್ರೇಮಿಗಳ ದಿನಾಚರಣೆಯ ಮರುದಿನ ಸಂಗೀತ ಪ್ರೇಮಿಗಳಿಗೆ ಜಯಶ್ರೀ ರಂಗಗೀತೆಗಳನ್ನು ಉಣಬಡಿಸಲಿದ್ದಾರೆ. ಜಯಶ್ರೀಯವರು ಅದ್ಭುತವಾಗಿ ನಟಿಸುವುದರ ಜೊತೆಗೆ ಅಷ್ಟೇ ಅದ್ಭುತವಾಗಿ ಹಾಡಬಲ್ಲರು ಎಂಬುದು ಎಲ್ಲರಿಗೆ ತಿಳಿದ ವಿಷಯ. ಕರಿಮಾಯಿ ತಾಯಿ ನಾಟಕದ ತಾಯೇ ರಂಗಗೀತೆ ಅವರ ಕಂಚಿನ ಕಂಠದಿಂದ ಹೊರಹೊಮ್ಮುತ್ತಿದ್ದರೆ ಪ್ರೇಕ್ಷಕರೆಲ್ಲರೂ ಸ್ತಬ್ಧವಾಗಿ ಕುಳಿತಿರುತ್ತಾರೆ.
ಕಬ್ಬನ್ ಪಾರ್ಕ್ ನಲ್ಲಿರುವ ಬ್ಯಾಂಡ್ ಸ್ಟ್ಯಾಂಡ್ ನಲ್ಲಿ ಭಾನುವಾರ ಸಂಜೆ 5ರಿಂದ 7ರವರೆಗೆ ರಂಗಸಂಗೀತ ಕಾರ್ಯಕ್ರಮ ಜರುಗಲಿದೆ. ಸ್ಥಳದಲ್ಲಿಯೇ ಕನ್ನಡ ಸಾಹಿತ್ಯ ಕೃತಿಗಳು, ಮಕ್ಕಳ ಪುಸ್ತಕಗಳು, ವ್ಯಂಗ್ಯಚಿತ್ರಗಳು, ಕಾಫಿ ಮಗ್ ಗಳು ಕೊಳ್ಳಲು ಲಭ್ಯವಾಗಲಿವೆ. ಸಂಗೀತದಾರಾಧಕರು ಕುಟುಂಬದೊಡನೆ ಬಂದು ಕಾರ್ಯಕ್ರಮವನ್ನು ಯಶಸ್ವಿಯಾಗಿಸಬೇಕೆಂದು ಆಯೋಜಕರಾದ ಎಂಎಸ್ ಪ್ರಸಾದ್ ಕೇಳಿಕೊಂಡಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : 99453 68083.
ಉದ್ಯಾನವನವೇ ಮುಕ್ತ ರಂಗಭೂಮಿಯಾಗಲಿದ್ದು ಪ್ರವೇಶ ಉಚಿತ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications