ವೈಭವೋಪೇತ ನಾಗಮಂಡಲದಲ್ಲಿ ರಾಧಿಕಾ
ಮಂಗಳೂರು, ಫೆ.14: ದಕ್ಷಿಣ ಕನ್ನಡ ಜಿಲ್ಲೆಯ ಪಾಲ್ತಾಜೆಯಲ್ಲಿರುವ ನಟಿ ರಾಧಿಕಾ ಅವರ ತೋಟದ ಮನೆಯಲ್ಲಿ ಶುಕ್ರವಾರ ರಾತ್ರಿ ನಾಗಮಂಡಲ ಪೂಜೆ ಸಾಂಗವಾಗಿ ನೆರವೇರಿತು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಧಿಕಾ ಮತ್ತವರ ಕುಟುಂಬ ವರ್ಗದ ಜತೆ ವೈಭವೋಪೇತವಾದ ನಾಗಮಂಡಲ ಪೂಜೆಯಲ್ಲಿ ಭಾಗವಹಿಸಿದ್ದರು.
ಶುಕ್ರವಾರ ರಾತ್ರಿ 11 ಗಂಟೆಯವರೆಗೂ ನಾಗಮಂಡಲ ಪೂಜೆ ನಡೆಯಿತು. ನಾಗಮಂಡಲ ಪೂಜೆ ಭಾರಿ ವೆಚ್ಚದಿಂದ ಕೂಡಿದ್ದು ಇದಕ್ಕಾಗಿ ಸುಮಾರು 25 ಲಕ್ಷ ರು.ಗಳನ್ನು ಖರ್ಚು ಮಾಡಲಾಗಿದೆ. ಪೂಜಾ ಕೈಂಕರ್ಯಕ್ಕೆ ಅಪಾರ ಭಕ್ತ ಸಮೂಹ ಸಹ ಸಾಕ್ಷಿಯಾಯಿತು. ರಾಧಿಕಾ ಅವರ ತಂದೆ ದೇವರಾಜ್ ಪೂಜಾ ಕಾರ್ಯದ ನೇತೃತ್ವ ವಹಿಸಿದ್ದರು.
ನಟಿ ರಾಧಿಕಾ ಕೈಗೊಂಡಿದ್ದ 'ಅಷ್ಟಪವಿತ್ರ ನಾಗಮಂಡಲ' ಸೇವೆಗೆ ಹಲವಾರು ಗಣ್ಯರು ಆಗಮಿಸಿದ್ದರು. ಭಟ್ವಾಳ ಶಾಸಕ ರಮಾನಾಥ್ ರೈ,ಕರಾವಳಿ ಅಭಿವೃದ್ಧಿ ಸಂಘದ ಅಧ್ಯಕ್ಷ ನಾಗರಾಜ ಶೆಟ್ಟಿ, ಪೂಜಾರಿಗಳು, ಮಠಾಧಿಪತಿಗಳ ಸಮ್ಮುಖದಲ್ಲಿ ಪೂಜೆ ನೆರವೇರಿತು.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ
ನಾಗಮಂಡಲ ಪೂಜೆಯ ವೈಶಿಷ್ಟ್ಯವೇನು












Click it and Unblock the Notifications