ಬಜರಂಗದಳ, ಶ್ರೀರಾಮಸೇನೆ ಪ್ರೇಮಿಗಳ ಪರ
ಮಂಗಳೂರು, ಫೆ.14: ಪ್ರೇಮಿಗಳ ದಿನಾಚರಣೆಗೆ (ಫೆ.14)ಯಾವುದೇ ರೀತಿಯಲ್ಲೂ ಅಡ್ಡಿಪಡಿಸುವುದಿಲ್ಲ ಹಾಗೂ ಕಾನೂನನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಶ್ರೀರಾಮಸೇನೆ ತಾಜಾ ಬೆಳವಣಿಗೆಯಲ್ಲಿ ಪ್ರಕಟಿಸಿದೆ.
ರಾಜ್ಯ ಸಹ ಸಂಚಾಲಕ ಪ್ರಸಾದ್ ಅತ್ತಾವರ ಈ ಕುರಿತು ಮಾತನಾಡುತ್ತಾ, ವಿವಿಧ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸುತ್ತಿವೆ. ಶ್ರೀರಾಮಸೇನೆಯ ಹೆಸರು ಕೆಡಿಸಲು ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.ಪ್ರೇಮಿಗಳ ದಿನಾಚರಣೆ ಹೆಸರಿನಲ್ಲಿ ಯುವಜನತೆ ಹಾದಿ ತಪ್ಪದಂತೆ ಎಚ್ಚರ ವಹಿಸಬೇಕು ಎಂದು ಅತ್ತಾವರ ಹೆತ್ತವರಲ್ಲಿ ಮನವಿ ಮಾಡಿಕೊಂಡರು.
ಪ್ರೇಮಿಗಳ ಪರವಾದ ಬಜರಂಗ ದಳ!
ಪ್ರೇಮಿಗಳ ದಿನಾಚರಣೆಗೆ ಅಡ್ಡಿಪಡಿಸುವುದಿಲ್ಲ ಎಂದು ಬಜರಂಗ ದಳ ಸಹ ಪ್ರಕಟಿಸಿದೆ. ''ಪ್ರೇಮಿಗಳ ದಿನಾಚರಣೆಗೆ ನಮ್ಮ ಆಕ್ಷೇಪಣೆ ಏನೂ ಇಲ್ಲ. ರಾಧೆ ಮತ್ತು ಕೃಷ್ಣರ ಅಮರ ಪ್ರೇಮದ ಆರಾಧಕರು ನಾವು'' ಎಂದು ಬಜರಂಗ ದಳ ರಾಷ್ಟ್ರೀಯ ಸಂಚಾಲಕ ತಿಳಿಸಿದ್ದಾರೆ. ನಿಜವಾದ ಪ್ರೇಮಿಗಳನ್ನು ನಾವು ಆರಾಧಿಸುತ್ತೇವೆ. ಪ್ರೇಮಿಗಳ ದಿನವನ್ನು ಕೇವಲ ಒಂದು ದಿನ ಆಚರಿಸಿದರೆ ಸಾಲದು 365 ದಿನಗಳ ಕಾಲವೂ ಆಚರಿಸಬೇಕು ಎಂದು ಅವರು ತಿಳಿಸಿದರು.
ಈ ಹಿಂದಿ ಬಜರಂಗದಳ ಪ್ರೇಮಿಗಳ ದಿನಾಚರಣೆ , ಪಬ್ ಮತ್ತು ರೆಸ್ಟೋರೆಂಟ್ ಗಳ ವಿರುದ್ಧ ಸಮರಸಾರಿತ್ತು. ಈಗ ಇದಕ್ಕ್ಕಿಂದ್ದಂತೆ ತನ್ನ ಧೋರಣೆಯನ್ನು ಬದಲಾಯಿಸಿಕೊಂಡು ಅಚ್ಚರಿಯನ್ನುಂಟು ಮಾಡಿದೆ. ಮಹಿಳೆಯ ಮೇಲೆ ದಾಳಿ ಮಾಡುವುದು ಹಾಗೂ ಅಸಭ್ಯವಾಗಿ ವರ್ತಿಸುವುದನ್ನೂ ಬಜರಂಗ ದಳ ಖಂಡಿಸಿದೆ.
(ದಟ್ಸ್ ಕನ್ನಡ ವಾರ್ತೆ)
ಹಿಂದೂ ಹೃದಯಕಮಲದ ವ್ಯಾಲಂಟೈನ್
ನೋವು ನಲಿವಿನ ಮಿಲನ ಕವನ












Click it and Unblock the Notifications