ಸಿಎಂ ವಾಹನಕ್ಕೂ ಕನ್ನಡ ನಾಮಫಲಕ ಕಡ್ಡಾಯ!
ಬೆಂಗಳೂರು, ಫೆ. 8:ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಾಹನ ಸೇರಿದಂತೆ ಎಲ್ಲಾ ನಾಗರೀಕರಿಗೂ ಮಾ. 1 ರ ಗಡುವು ನೀಡಲಾಗಿದೆ. ಅಷ್ಟರೊಳಗೆ ತಮ್ಮ ವಾಹನಗಳಿಗೆ ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಗುಡುಗಿದ್ದಾರೆ.
2009 ಅನ್ನು ಕನ್ನಡ ಅನುಷ್ಠಾನ ವರ್ಷ ಎಂದು ಬರೀ ಘೋಷಿಸಿದರೆ ಸಾಲದು, ಅದನ್ನು ಮನಃ ಪೂರ್ವಕವಾಗಿ ಅನುಸರಿಸಬೇಕು.ಎಲ್ಲಾ ಶಾಸಕರ ವಾಹನಗಳಿಗೆ ಮಾ. 1 ರೊಳಗೆ ಕನ್ನಡ ನಾಮಫಲಕ ಅಳವಡಿಸಿಕೊಳ್ಳಲು ಹೇಳಲಾಗಿದೆ. ತಪ್ಪಿದಲ್ಲಿ ಅವರ ಮೇಲೆ ಒತ್ತಡ ಹೇರಲಾಗುವುದು ಎಂದು ಚಂದ್ರು ಸುದ್ದಿಗಾರರಿಗೆ ತಿಳಿಸಿದರು.
ಈಗಾಗಲೇ
ಕನ್ನಡ
ನಾಮಫಲಕ
ಅಳವಡಿಕೆಯಲ್ಲಿ
ವಿಳಂಬವಾಗಿದೆ.
ಸರ್ಕಾರಿ
ವಾಹನಗಳು
ಈ
ವಿಷಯದಲ್ಲಿ
ಮಾದರಿಯಾಗಿರಬೇಕಿತ್ತು.
ಆದರೆ,
ಏಕೆ
ತಡವಾಗುತ್ತಿದೆ
ತಿಳಿಯುತ್ತಿಲ್ಲ.
ಈ
ಬಗ್ಗೆ
ಕ್ರಮ
ಕೈಗೊಳ್ಳಬೇಕೆಂದು
ಸರ್ಕಾರಕ್ಕೆ
ಪತ್ರ
ಬರೆದು
ಎಚ್ಚರಿಸಲಾಗುವುದು.
ಕನ್ನಡ
ಅನುಷ್ಠಾನಕ್ಕೆ
ಅಧಿಕಾರಿಗಳ
ಸಹಕಾರ
ಅಗತ್ಯ.
ಆದರೆ,
ಹಲವರು
ಈ
ಬಗ್ಗೆ
ಉದಾಸೀನರಾಗಿದ್ದಾರೆ
ಎಂದು
ಚಂದ್ರು
ಖೇದ
ವ್ಯಕ್ತಪಡಿಸಿದರು.
(ದಟ್ಸ್
ಕನ್ನಡ
ವಾರ್ತೆ)