ಮಾಲೆಗಾಂವ್ ಸ್ಫೋಟ: ಮುತಾಲಿಕ್ ವಿಚಾರಣೆ
ಮುಂಬೈ, ಜ.30:ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಲಿದೆ.
ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಾದ ಶ್ರೀಕಾಂತ್ ಪ್ರಸಾದ ಪುರೋಹಿತ್ ಮತ್ತ್ತು ಸಾಧ್ವಿ ಪ್ರಗ್ಯಾ ಸಿಂಗ್ ಅವರೊಂದಿಗೆ ಮುತಾಲಿಕ್ ಗೆ ಸಂಪರ್ಕವಿತ್ತು ಎಂಬ ಊಹಾಪೋಹದ ಹಿನ್ನೆಲೆಯಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿದೆ.
ಮುತಾಲಿಕ್ ರ ವಿಚಾರಣೆಗಾಗಿ ಎಟಿಎಸ್ ತಂಡವೊಂದು ಮಂಗಳೂರಿಗೆ ಆಗಮಿಸಲಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ಪಿ.ರಘುವಂಶಿ ತಿಳಿಸಿದ್ದಾರೆ. ಜ.24ರಂದು ಮಂಗಳೂರಿನ ಅಮ್ನೇಶಿಯಾ ದಿಲಂಜ್ ಪಬ್ ದಾಳಿಗೆ ಸಂಬಂಧಿಸಿದಂತೆ ಮುತಾಲಿಕ್ ರನ್ನು ಒಂದು ದಿನದ ಮಟ್ಟಿಗೆ ಪೊಲೀಸ್ ಬಂಧನಕ್ಕೆ ಗುರುವಾರ ಒಪ್ಪಿಸಲಾಗಿದೆ.
(ಏಜೆನ್ಸೀಸ್)











Click it and Unblock the Notifications