ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಚ ತಿನ್ನುತ್ತಿದ್ದ ಬಿಜೆಪಿ ಶಾಸಕ ಬಲೆಗೆ

By Staff
|
Google Oneindia Kannada News

ಬೆಂಗಳೂರು, ಜ. 29: ನಗರದ ಶಾಸಕರ ಭವನದ ಮೇಲೆ ಗುರುವಾರ ಮಧ್ಯಾಹ್ನ ಹಠಾತ್ ದಾಳಿ ನಡೆಸಿದ ಲೋಕಾಯುಕ್ತರ ತಂಡ, ಭಾರಿ ಮಿಕವನ್ನು ಬಲೆಗೆ ಕೆಡವಿಕೊಂಡಿದೆ. ಲಂಚ ಸ್ವೀಕರಿಸುತ್ತಿದ್ದ ಕೆಜಿಎಫ್ ನ ಬಿಜೆಪಿ ಶಾಸಕ ವೈ. ಸಂಪಂಗಿ ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಇಂದು ಮಧ್ಯಾಹ್ನದ ವೇಳೆಗೆ ಶಾಸಕರ ಭವನದ ಕಚೇರಿ ಹೊಕ್ಕ ಲೋಕಾಯುಕ್ತರ ತಂಡ, ಬಿಜೆಪಿ ಶಾಸಕರನ್ನು ಸೆರೆ ಹಿಡಿದಿದೆ. ಕ್ರಿಮಿನಲ್ ಮೊಕದ್ದಮೆಯೊಂದನ್ನು ಮುಚ್ಚಿಹಾಕಲು ಫರೂಕ್ ಎಂಬುವವರಿಂದ ಶಾಸಕ ಸಂಪಂಗಿ ಲಂಚ ಪಡೆಯುತ್ತಿದ್ದರು ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಲೋಕಾಯುಕ್ತ ಅಧಿಕಾರಿಗಳು ಶಾಸಕರ ಭವನದಲ್ಲಿ ಇನ್ನೂ ಪರೀಶೀಲನೆ ನಡೆಸುತ್ತಿದ್ದಾರೆ.

Lokayukta nets corrupt MLA Sampangi red handed
ಕೆಜಿಎಫ್ ನಲ್ಲಿ ಕಟ್ಟಡ ನಿರ್ಮಾಣ ವಿಷಯದಲ್ಲಿ ಅಯೂಬ್ ಹಾಗೂ ಫರೂಕ್ ಅವರಿಗೆ ವ್ಯಾಜ್ಯ ನಡೆದಿತ್ತು. ಒತ್ತಡಕ್ಕೆ ಒಳಗಾಗಿ ಅಯೂಬ್ ಅವರು ವಿಷ ಸೇವಿಸಿ ಆಸ್ಪತ್ರೆ ಸೇರಿಸಿದ್ದರು. ಇದರಿಂದ ಫರೂಕ್ ಅವರ ಕ್ರಿಮಿನಲ್ ಕೇಸ್ ದಾಖಲಾಗಿತ್ತು. ಕೇಸ್ ನಿಂದ ಬಚಾವಾಗಲು ಶಾಸಕರ ಸಹಾಯ ಬಯಸಿ, 5 ಲಕ್ಷ ನೀಡಲು ಮುಂದಾಗಿದ್ದರು ಎನ್ನಲಾಗಿದೆ. ಇಂದು 50 ಸಾವಿರ ರು ನಗದು ಹಾಗೂ 4.5 ಲಕ್ಷ ರು ಮೊತ್ತದ ಚೆಕ್ ಹಿಡಿದು ಕೊಂಡು ಶಾಸಕರ ಕಚೇರಿ ಹೊಕ್ಕ ಫರೂಕ್, ಶಾಸಕ ಸಂಪಂಗಿ ಅವರಿಗೆ ಲಂಚ ನೀಡುತ್ತಿದ್ದಾಗ ಲೋಕಾಯುಕ್ತರು ಶಾಸಕರನ್ನು ಬಲೆಯಲ್ಲಿ ಕೆಡವಿಕೊಂಡಿದ್ದಾರೆ. ಸದ್ಯ ಶಾಸಕರ ಭವನದಲ್ಲಿರುವ ಶಾಸಕ ಸಂಪಂಗಿ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

ಡಿಕೇಶಿ ಕಿಡಿ:
ಲೋಕಾಯುಕ್ತರಿಗೆ ಅಭಿನಂದಿಸಲು ಬಯಸುತ್ತಿದ್ದೇನೆ. ಸರ್ಕಾರಿ ಅಧಿಕಾರಿಗಳ ಅವ್ಯವಹಾರವನ್ನು ಕಣ್ಣಾರೆ ನೋಡುತ್ತಿದ್ದೆವು, ಈಗ ಇದು ಸರ್ಕಾರದ ದೊಡ್ಡ ಹಿನ್ನೆಡೆ. ಜನ ಸಾಮಾನ್ಯರಿಂದ ಹಣ ಸುಲಿಗೆ ಮಾಡುವುದು ನಿರಂತರವಾಗಿ ನಡೆದುಕೊಂಡು ಬಂದಿದೆ. ಇದು ಎಲ್ಲಾ ಶಾಸಕರಿಗೆ ಪಾಠ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.

ಕುಮಾರಸ್ವಾಮಿ ಛೀಮಾರಿ:ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಏನು ಅಭಿವೃದ್ಧಿ ಎಂದು ಹೇಳುತ್ತಿದ್ದಾರೆ ಅದು ಜನರ ಅಭಿವೃದ್ಧಿಯಲ್ಲ. ಬಿಜೆಪಿ ಪಕ್ಷದ ಅಭಿವೃದ್ಧಿ ಅಂಥ ಸಾಬೀತಾಗಿದೆ. ಇದು ಬಿಜೆಪಿ ಪಕ್ಷದ ಸಿದ್ಧಾಂತ. ಹಣಕ್ಕೆ ಎಷ್ಟು ಪ್ರಾಮುಖ್ಯ ಕೊಟ್ಟಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ. ಆ ಶಾಸಕರನ್ನು ಪಕ್ಷದಿಂದ ಹೊರ ಹಾಕಬೇಕು. ಬಿಜೆಪಿ ಕೆಟ್ಟ ಮಾರ್ಗದಿಂದಲೇ ಅಧಿಕಾರಕ್ಕೆ ಬಂದಿದ್ದು, ಪಕ್ಷೇತರ ಶಾಸಕರು ಜೀವಂತ ಉದಾಹರಣೆ. ಭ್ರಷ್ಟಾಚಾರ ನಿರ್ಮೂಲನೆಗೆ ಜನ ಸಾಮಾನ್ಯರಿಂದದೊಡ್ಡ ಹೋರಾಟ ಅಗತ್ಯವಿದೆ. ಲೋಕಾಯುಕ್ತರಿಗೆ ಸಂಪೂರ್ಣ ಅಧಿಕಾರ ನೀಡಬೇಕು. ನಾನು ಅಧಿಕಾರದಲ್ಲಿದ್ದಾಗ ಈ ಬಗ್ಗೆ ಪ್ರಸ್ತಾಪಿಸಿದ್ದೆ. ಆದರೆ ಶಾಸಕರು ಬೆಂಬಲಿಸಿರಲಿಲ್ಲ ಎಂದು ಜೆಡಿಎಸ್ ನ ಮುಖಂಡ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದರು.

(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
ಮಂಗಳೂರು ಘಟನೆ, ಸಿಎಂ ರಾಜೀನಾಮೆಗೆ ಆಗ್ರಹ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X