ಸಂಕಷ್ಟದಲ್ಲಿ ಇಡುಗಂಜಿ ಮಹಾಗಣಪತಿ
ಹೊನ್ನಾವರ, ಜ. 19 : ಅರ್ಚಕರ ಮತ್ತು ಆಡಳಿತ ಮಂಡಳಿಯ ವಿವಾದದಿಂದ ಇತಿಹಾಸ ಪ್ರಸಿದ್ಧ ಇಡಗುಂಜಿ ಮಹಾಗಣಪತಿ ದೇವಾಲಯದಲ್ಲಿ ಸಂಕ್ರಾಂತಿ ಆಚರಣೆಯ ಕೊನೆ ದಿನವಾದ ನಿನ್ನೆ ಸೂರ್ಯಾಸ್ತದವರೆಗೂ ಗಣೇಶನಿಗೆ ಯಾವುದೇ ಪೂಜೆ ನಡೆಯಲಿಲ್ಲ.
ಬಳಿಕ ಊರಿನ ಮುಖಂಡರು ಮಧ್ಯಸ್ತಿಕೆ ವಹಿಸಿ ಪರ್ಯಾಯ ಪೂಜೆಗೆ ವ್ಯವಸ್ಥೆ ಮಾಡಿದ್ದಾರೆ. ಇದರಿಂದಾಗಿ ಭಾನುವಾರ ರಾತ್ರಿಯ ಪೂಜೆ ಮಾತ್ರ ನಡೆದಿದೆ. ಅರ್ಚಕರ ಮತ್ತು ಆಡಳಿತ ಮಂಡಳಿಯ ವೈಮನಸ್ಸಿನಿಂದಾಗಿ ಈ ಬೆಳವಣಿಗೆ ನಡೆದು ರಾತ್ರಿ ವೇಳೆಗೆ ಶಾಂತವಾಯಿತು. ಇದರಿಂದಾಗಿ ದೇವಾಲಯಕ್ಕೆ ಬಂದ ಸಾವಿರಾರು ಭಕ್ತಾದಿಗಳಿಗೆ ಪೂಜೆ, ಪ್ರಸಾದವಿಲ್ಲದ೦ತಾಯಿತು. ಭಾನುವಾರದ ಅನ್ನ ದಾಸೋಹ ಕಾರ್ಯವು ನಡೆಯಲಿಲ್ಲ. ವಿವಾದ, ವೈಮನಸ್ಸು, ಪ್ರತಿಭಟನೆ ಗಣೇಶನನ್ನು ಬಿಟ್ಟಿಲ್ಲ. ಎಲ್ಲ ಗಣೇಶನ ಮಹಿಮೆ ಎನ್ನಬಹುದು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications