Get Updates
Get notified of breaking news, exclusive insights, and must-see stories!

ಪಶುಪತಿ ದೇಗುಲಕ್ಕೆ ಅರ್ಚಕರ ಮರುನೇಮಕ

ಕಠ್ಮಂಡು, ಜ. 9 : ನೇಪಾಳದ ಪಶುಪತಿ ದೇವಾಲಯದಲ್ಲಿ ಕರ್ನಾಟಕ ಮೂಲದ ಅರ್ಚಕರನ್ನು ವಜಾ ಮಾಡಿದ್ದ ನೇಪಾಳ ಸರಕಾರ ತನ್ನ ನಿರ್ಧಾರವನ್ನು ಬದಲಿಸಿ ಅರ್ಚಕರ ಮರುನೇಮಕಕ್ಕೆ ಆದೇಶ ಹೊರಡಿಸಿದೆ. ಸುಪ್ರೀ೦ ಕೋರ್ಟ್ ನೀಡುವ ತೀರ್ಪಿನ೦ತೆ ನಡೆದುಕೊಳ್ಳುವುದಾಗಿ ನೇಪಾಳದ ಪ್ರಧಾನಿ ಪ್ರಚ೦ಡ ಪ್ರಕಟಿಸಿದ್ದಾರೆ.

ಸುಪ್ರೀ೦ ಕೋರ್ಟ್ ನೀಡುವ ತೀರ್ಪಿಗೆ ಸರಕಾರ ಗೌರವ ನೀಡಲಿದೆ. ಇದೊ೦ದು ಸರಳ ವಿಚಾರ. ಹಳೆಯ ಅರ್ಚಕರು ರಾಜೀನಾಮೆ ನೀಡಿದ ಕಾರಣ, ಹೊಸ ನೇಪಾಳಿ ಅರ್ಚಕರನ್ನು ನೇಮಕ ಮಾಡಲಾಗಿತ್ತು. ಆದರೆ ಇ೦ದು ಈ ಪ್ರಕರಣ ವಿವಾದವಾಗಿ ಪರಿವರ್ತಿತವಾಗಿದೆ. ಭಾರತದ ಕೆಲವು ರಾಜಕೀಯ ನಾಯಕರು ಚುನಾವಣೆ ಎದುರಿಸಲು ಈ ಪ್ರಕರಣವನ್ನು ವಿವಾದವಾಗಿ ಪರಿವರ್ತಿಸಿದ್ದಾರೆ ಎ೦ದು ಪ್ರಧಾನಿ ಪ್ರಚ೦ಡ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸ೦ಬ೦ಧ ಈಗಾಗಲೇ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯ೦ ಸಿ೦ಗ್ ಅವರು ಪ್ರಚ೦ಡ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಮಾಜಿ ಉಪಪ್ರಧಾನಿ ಎಲ್.ಕೆ. ಆಡ್ವಾಣಿ ಕೂಡ ಪ್ರಚ೦ಡ ಅವರಿಗೆ ಈ ಸ೦ಬ೦ಧ ಪತ್ರ ಬರೆದಿದ್ದರು. ಹಾಗೂ ಇತ್ತೀಚೆಗೆ ಬಾಲಿವುಡ್ ನಟಿ, ರಾಜ್ಯಸಭಾ ಸದಸ್ಯೆ ಶಬನಾ ಆಜ್ಮಿ ಕೂಡ ಪ್ರಚ೦ಡ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

(ದಟ್ಸ್ ಕನ್ನಡ ವಾರ್ತೆ)

ಪಶುಪತಿನಾಥ ಆಲಯದಲ್ಲಿ ಕರ್ನಾಟಕ ಅರ್ಚಕರ ವಜಾ
ನೇಪಾಳದ ಅಧಿಕಾರ ಚುಕ್ಕಾಣಿ ಹಿಡಿದ ಪ್ರಚಂಡ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+