ಮಿಸ್ ಸದಾರಮೆ ನೋಡಲು ಮರೀಬೇಡಿ
ಬೆಂಗಳೂರು,ಜ.6: ದಿವಂಗತ ಕೆ.ವಿ.ಸುಬ್ಬಣ್ಣ ಅವರ 'ಮಿಸ್ ಸದಾರಮೆ' ನಾಟಕವನ್ನು ಸಮಷ್ಟಿ ನಾಟಕ ತಂಡ ಬುಧವಾರ(ಜ.7) ಪ್ರದರ್ಶಿಸಲಿದೆ. ಮೂಲತಃ ಈ ನಾಟಕವನ್ನು ಬೆಳ್ಳಾವೆ ನರಹರಿ ಶಾಸ್ತ್ರಿಗಳು 'ಸದಾರಮೆ' ಹೆಸರಿನಲ್ಲಿ ರಚಿಸಿದ್ದರು. ನೀಲಕಂಠೇಶ್ವರ ನಾಟ್ಯ ಸಂಘ (ನೀನಾಸಂ) ಸಂಸ್ಥಾಪಕ ದಿವಂಗತ ಸುಬ್ಬಣ್ಣ ಅವರು ಬೆಳ್ಳಾವೆ ನರಹರಿ ಶಾಸ್ತ್ರಿಗಳ 'ಸದಾರಮೆ' ಯನ್ನು ಅಲ್ಪ ಸ್ವಲ್ಪ ಬದಲಾವಣೆ ಮಾಡಿ ಮಿಸ್ ಸದಾರಮೆ ನಾಟಕವನ್ನು ರಚಿಸಿದ್ದಾರೆ.
ಸದಾರಮೆ ಎಂಬ ಮಧ್ಯಮ ವರ್ಗದ ಮಹಿಳೆಯೊಬ್ಬರ ಕಥೆಯೆ ಮಿಸ್ ಸದಾರಮೆ. ರಾಜಕುಮಾರನೊಬ್ಬ ಆಕೆಯನ್ನು ಇಷ್ಟಪಟ್ಟು ವಿವಾಹವಾಗುತ್ತಾನೆ. ಆಕೆಗಾಗಿ ತನ್ನ ಇಡೀ ಸಾಮ್ರಾಜ್ಯವನ್ನು ತೊರೆಯುತ್ತಾನೆ. ಕಡೆಗೆ ರಾಜಕುಮಾರ ಸದಾರಮೆಯೊಂದಿಗೆ ಅಜ್ಞಾತ ಸ್ಥಳವೊಂದಕ್ಕೆ ಹೊರಟು ಹೋಗುತ್ತಾನೆ. ದಾರಿ ಮಧ್ಯೆ ಕೆಲವು ಲೋಭಿಗಳು ಮತ್ತು ಕಪಟ ಜನರ ಕೈಗೆ ಸಿಕ್ಕಿ ಒಬ್ಬರನ್ನೊಬ್ಬರು ಅಗಲುತ್ತಾರೆ. ಕಡೆಗೆ ಪುರುಷ ವೇಷಧಾರಿಯಾಗಿ ಸದಾರಮೆ ರಾಜಕುಮಾರನನ್ನು ಪುನಃ ಸೇರುತ್ತಾಳೆ. ಇದೊಂದು ಸಂಪೂರ್ಣ ಹಾಸ್ಯ ಪ್ರಧಾನವಾದ ನಾಟಕ. ಸದಾರಮೆ ಮತ್ತು ಮಿಸ್ ಸದಾರಮೆ ನಾಟಕಗಳು ಜನಪ್ರಿಯ ಪ್ರದರ್ಶನ ಕಂಡಿವೆ.
ಹೆಚ್ಚಿನ ಮಾಹಿತಿಗಾಗಿ: 9845163380
(ದಟ್ಸ್ ಕನ್ನಡ ಚಿತ್ರವಾರ್ತೆ)
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ










Click it and Unblock the Notifications