ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈಉಗ್ರರ ಅಟ್ಟಹಾಸ; ಕ್ರಿಕೆಟ್ ಸರಣಿ ರದ್ದು

By Staff
|
Google Oneindia Kannada News

ಮುಂಬೈ, ನ. 27 : ಮುಂಬೈನಲ್ಲಿ ಬುಧವಾರ ಉಗ್ರರು ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಮುಂದಿನ ಪಂದ್ಯಗಳನ್ನು ಆಡಲು ನಿರಾಕರಿಸಿದ್ದರಿಂದ ಪ್ರವಾಸವನ್ನು ರದ್ದು ಮಾಡಲಾಗಿದೆ. ತಂಡದ ಆಟಗಾರರ ಭದ್ರತೆಯ ಗಮನದಲ್ಲಿರಿಸಿಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ನಾವು ಶೀಘ್ರ ಸ್ವದೇಶಕ್ಕೆ ಮರಳಲು ಇಚ್ಚಿಸುತ್ತೇವೆ ಎಂದು ಇಂಗ್ಲೆಂಡ್ ತಂಡ ಮಾಧ್ಯಮ ಸಲಹೆಗಾರ ಅಂಡ್ರೂ ವಾಲ್ ಪೋಲ್ ತಿಳಿಸಿದ್ದಾರೆ.

ಇಂದು ಬೆಳಗ್ಗೆ ಬಿಸಿಸಿಐ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಇಂಗ್ಲೆಂಡ್ ತಂಡದ ಸಲಹಾ ಮಂಡಳಿ, ತಮ್ಮ ತಂಡದ ಕಾಯುವುದು ಮುಖ್ಯವಾಗಿದೆ. ವಾಣಿಜ್ಯ ನಗರಿ ಮುಂಬೈಯಲ್ಲಿ ನಡೆದ ಭೀಕರ ಸ್ಫೋಟ ತಂಡದ ಆತ್ಮಸ್ಥೈರ್ಯವನ್ನು ಕುಗ್ಗಿಸಿದೆ. ಆಟಗಾರರು ಮುಂದಿನ ಪಂದ್ಯಗಳನ್ನು ಆಡುವ ಮನಸ್ಥಿತಿಯಲ್ಲಿ ಇಲ್ಲ. ಆದ್ದರಿಂದ ಪ್ರವಾಸವನ್ನು ರದ್ದುಗೊಳಿಸಿ ಸ್ವದೇಶಕ್ಕೆ ಮರಳುವುದಾಗಿ ಇಂಗ್ಲೆಂಡ್ ಮಂಡಳಿ ಬಿಸಿಸಿಐಗೆ ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಲು ಮಾಧ್ಯಮ ಸಲಹೆಗಾರ ವಾಲ್ ಪೋಲ್ ನಿರಾಕರಿಸಿದ್ದಾರೆ. ಎರಡು ಏಕದಿನ ಪಂದ್ಯ ಹಾಗೂ ಎರಡು ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ಅಡಬೇಕಿತ್ತು. ಭಾರತ ಈಗಾಗಲೇ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X