ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಲ್ಲಿ ಸ್ಫೋಟ: ನಾಲ್ಕು ಜೀವಂತ ಬಾಂಬ್ ನಿಷ್ಕ್ರಿಯ

By Staff
|
Google Oneindia Kannada News

ನವದೆಹಲಿ, ಸೆ. 14 : ಶನಿವಾರ ಸಂಜೆ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ರಾಷ್ಚ್ರ ರಾಜಧಾನಿ ತಲ್ಲಣಿಸಿದೆ. ಈ ಮಧ್ಯೆ ತೀವ್ರ ಶೋಧದ ನಂತರ ಶನಿವಾರ ಮತ್ತು ಭಾನುವಾರ ಬೆಳಗಿನ ಹೊತ್ತಿಗೆ ನಾಲ್ಕು ಜೀವಂತ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸುವಲ್ಲಿ ಬಾಂಬ್ ನಿಷ್ಕ್ರಿಯ ದಳ ಯಶಸ್ವಿಯಾಗಿದೆ.

ಬ್ಯಾಡ್ ಆಪರೇಶನ್ ಹೆಸರಿನಲ್ಲಿ ಕಾರ್ಯಚರಣೆ ನಡೆಸುತ್ತಿರುವ ಉಗ್ರರು ಕಳೆದ ಜುಲೈ ತಿಂಗಳಲ್ಲಿ ಬೆಂಗಳೂರು, ಅಹಮದಾಬಾದ್ ನಲ್ಲಿ ದುಷ್ಕೃತ್ಯ ನಡೆಸಿತ್ತು. ಬೆಂಗಳೂರಿನಲ್ಲಿ ಜುಲೈ 26ರಂದು 8 ಕಡೆಗಳಲ್ಲಿ ಸ್ಫೋಟ ಸಂಭವಿಸಿತ್ತು. ಸ್ಫೋಟದಲ್ಲಿ 1 ಮೃತಪಟ್ಟಿದ್ದರು, 6 ಜನರಿಗೆ ಗಾಯಗೊಂಡಿದ್ದರು. ಮರುದಿನ ಅಂದರೆ ಜುಲೈ 27 ರಂದು ಅಹಮದಾಬಾದ್ ನಲ್ಲಿ ಸುಮಾರು 17 ಕಡೆ ಬಾಂಬ್ ಸ್ಫೋಟಗೊಂಡಿತ್ತು. 60ಕ್ಕೂ ಮಂದಿ ಮೃತಪಟ್ಟಿದ್ದರು. 200 ಹೆಚ್ಚು ಜನರು ಗಾಯಗೊಂಡಿದ್ದರು. ಅಲ್ಲದೆ ಸೂರತ್ ನಗರದಲ್ಲೂ ಅನೇಕ ಜೀವಂತ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಇಂಡಿಯನ್ ಮುಜಾಹಿದೀನ್ ಸಂಘಟನೆ ಕೃತ್ಯದ ಹೊಣೆಯನ್ನು ಹೊತ್ತಿದ್ದರು.

ದೆಹಲಿಯ ಇಂಡಿಯಾ ಗೇಟ್, ರೀಗಲ್ ಟಾಕೀಸ್, ಚಿಲ್ಡ್ರನ್ ಪಾರ್ಕ್, ಸೆಂಟ್ರಲ್ ಪಾರ್ಕ್ ಪ್ರದೇಶದಲ್ಲಿ ನಾಲ್ಕು ಜೀವಂತ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ತನಿಖೆ ಮುಂದುವರೆದಿದೆ.

(ದಟ್ಸ್ ಕನ್ನಡ ವಾರ್ತೆ)
ದಿಲ್ಲಿ ಸ್ಫೋಟ : 10 ಶಂಕಿತ ವ್ಯಕ್ತಿಗಳ ವಿಚಾರಣೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X