ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನೆಗೆ ಗುಡ್ ಬೈ : ಕಮಲಕ್ಕೆ ಜೈ ಎಂದ ಪರಿಮಳ ನಾಗಪ್ಪ

By Staff
|
Google Oneindia Kannada News

ಮೈಸೂರು, ಆ. 25 : ಆಪರೇಷನ್ ಕಮಲ ಮುಂದುವರೆದ ಭಾಗವಾಗಿ ಹನೂರು ಕ್ಷೇತ್ರದ ಮಾಜಿ ಶಾಸಕಿ ಹಾಗೂ ಬಿಎಸ್ಪಿ ಪಕ್ಷದ ಪರಿಮಳಾ ನಾಗಪ್ಪ ಅವರು ಸೋಮವಾರ ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಸಮ್ಮುಖದಲ್ಲಿ ವಿದ್ಯುಕ್ತವಾಗಿ ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.

ರಾಜ್ಯದಲ್ಲಿ ಅಂಥ ಹೇಳಿಕೊಳ್ಳುವಂಥ ಸ್ಥಿತಿಯಲ್ಲಿ ಇಲ್ಲದ ಬಿಎಸ್ಪಿ ಅಂಬಾರಿ ಕಳಚಿಕೊಂಡ ಪರಿಮಳಾ ನಾಗಪ್ಪ ಸೋಮವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಕಳೆದ ವಿಧಾನಸಭೆಯ ಪೂರ್ವದಲ್ಲಿ ಮಾಜಿ ಸಚಿವ ಪಿಜೆಪಿ ಸಿಂಧ್ಯಾ ಅವರು ಬಿಎಸ್ಪಿ ಸೇರಿಕೊಂಡಿದ್ದರು. ಅವರ ನಡೆಯನ್ನು ಅನುಸರಿಸಿದ್ದ ಪರಮಳ ನಾಗಪ್ಪ ಕೂಡಾ ಬಿಎಸ್ಪಿ ಸೇರಿಕೊಂಡಿದ್ದರು.

ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಬಿಎಸ್ ಪಿ ಧೂಳಿಪಟವಾಗಿತ್ತು. ನಂತರದ ದಿನಗಳಲ್ಲಿ ಸಿಂಧ್ಯಾ ಅವರನ್ನು ಪಕ್ಷದಿಂದ ವಜಾಗೊಳಿಸಲಾಯಿತು. ಇನ್ನೊಬ್ಬ ಮುಖಂಡ ಗೋಪಾಲ ಅವರನ್ನು ಕೂಡಾ ಮಾಯಾವತಿ ಪಕ್ಷದಲ್ಲಿ ಇಟ್ಟುಕೊಳ್ಳಲು ಮನಸ್ಸು ಮಾಡಲಿಲ್ಲ. ರಾಜ್ಯದಲ್ಲಿ ಬಿಎಸ್ಪಿ ಪಕ್ಷದ ಅಸ್ತಿತ್ವ ಕಳೆದುಕೊಳ್ಳುವುದರ ಜತೆಗೆ ಹೇಳಿಕೊಳ್ಳುವಂಥ ನಾಯಕರ ಕೊರತೆ ಎದುರಿಸುತ್ತಿದ್ದರಿಂದ ಪರಿಮಳ ನಾಗಪ್ಪ ಬಿಜೆಪಿ ಸೇರ್ಪಡೆಯಾಗಲು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಅವರು ಪರಿಮಳ ನಾಗಪ್ಪ ಬಿಜೆಪಿ ಶಾಲು ಹೊದಿಸುವ ಮೂಲಕ ಪಕ್ಷಕ್ಕೆ ಅಧಿಕೃತವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಪರಿಮಳ ನಾಗಪ್ಪ ಅವರ ಅಪಾರ ಸಂಖ್ಯೆ ಬೆಂಬಲಿಗರು ಕೂಡಾ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಆಪರೇಶನ್ ಕಮಲಕ್ಕೆ ದೇವೇಗೌಡ ತೀವ್ರ ಆಕ್ಷೇಪ
ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಬಿಜೆಪಿ ಸೇರ್ಪಡೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X