ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಸಾಪ ಚುನಾವಣೆ : ನಲ್ಲೂರು ಪ್ರಸಾದ್ ಆಯ್ಕೆ ಖಚಿತ
ಬೆಂಗಳೂರು, ಆ. 25 : ಕನ್ನಡಿಗರ ಅತಿದೊಡ್ಡ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಗೆ 23ನೇ ಅಧ್ಯಕ್ಷರಾಗಿ ಸಾಹಿತಿ ಡಾ.ಆರ್.ಕೆ. ನಲ್ಲೂರು ಪ್ರಸಾದ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಭಾನುವಾರ ನಡೆದ ಚುನಾವಣೆಯಲ್ಲಿ ಒಟ್ಟು 61958 ಮತದಾರರ ಪೈಕಿ ಶೇ. 52 ರಷ್ಟು ಮತದಾನವಾಗಿದೆ. ಕೇಂದ್ರ ಸಂಘದ ಆಯ್ಕೆಯ ಅಧಿಕೃತ ಫಲಿತಾಂಶ ಆ.26 ರಂದು ಪ್ರಕಟಿಸಲಾಗುತ್ತಿದೆ ಎಂದು ಚುನಾವಣಾಧಿಕಾರಿ ನಾಗರಾಜ್ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ನಲ್ಲೂರು ಪ್ರಸಾದ್, ಕೆ. ವಿದ್ಯಾಶಂಕರ್ ಹಾಗೂ ಸಿ.ವೀರಣ್ಣ ಸ್ಪರ್ಧಿಸಿದ್ದರು. ಅವರಲ್ಲಿ ನಲ್ಲೂರು ಪ್ರಸಾದ್ 7200ಕ್ಕೂ ಅಧಿಕ ಮತಗಳ ಅಂತರದಲ್ಲಿದ್ದಾರೆ. ನಲ್ಲೂರು ಪ್ರಸಾದ್ 19 ಸಾವಿರ, ವಿದ್ಯಾಶಂಕರ್ 9 ಸಾವಿರ ಹಾಗೂ ಸಿ.ವೀರಣ್ಣ 6500 ಮತಗಳನ್ನು ಪಡೆದಿದ್ದಾರೆ. ಕಳೆದ ಸಲ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಲ್ಲೂರು ಪ್ರಸಾದ್ ಅವರು,ಸಾಹಿತಿ ಚಂದ್ರಶೇಖರ್ ಪಾಟೀಲ್ ಎದುರು ಸೋಲನುಭವಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Monday, August 25, 2008, 10:19 [IST]