ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

25 ಹೊಸ ಯೋಜನೆಗಳಿಗೆ ಸರ್ಕಾರ ಹಸಿರು ನಿಶಾನೆ

By Staff
|
Google Oneindia Kannada News

ಬೆಂಗಳೂರು,ಆ.21: ರಾಜ್ಯದ ಅಭಿವೃದ್ಧಿ ಹಿನ್ನೆಯಲ್ಲಿ ಬಂಡವಾಳ ಹೂಡಲು ಬಂದ ಒಟ್ಟು 31ಪ್ರಸ್ತಾವನೆಗಳಲ್ಲಿ 25 ಯೋಜನೆಗಳನ್ನು ಅನುಮೋದಿಸಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ 15ನೇ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಸುಮಾರು 30 ಸಾವಿರ ಕೋಟಿ ರು.ಗಳ ಯೋಜನೆ ಇದಾಗಿದ್ದು, ಒಟ್ಟು 2.5 ಲಕ್ಷ ಉದ್ಯೋಗಗಳು ಈ ಯೋಜನೆಗಳಿಂದ ಸೃಷ್ಟಿಯಾಗಲಿವೆ ಎಂದು ಅವರು ವಿವರ ನೀಡಿದರು.

ಸರ್ಕಾರ ಅನುಮೋದಿಸಿದ 25 ಹೊಸ ಯೋಜನೆಗಳಲ್ಲಿ ಮುಖ್ಯವಾಗಿ 2 ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, 2 ಸಿಮೆಂಟ್ ಉತ್ಪಾದನಾ ಘಟಕಗಳು,1 ಸಕ್ಕರೆ ಕಾರ್ಖಾನೆ,1 ವಿದ್ಯುತ್ ಉತ್ಪಾದನಾ ಘಟಕ, 1 ಬಯೋಡೀಸೆಲ್ ಘಟಕ, 2 ವಿಶೇಷ ಕೈಗಾರಿಕೆಗಳು ಸೇರಿವೆ. ಹಾಗೆಯೇ ಬಳ್ಳಾರಿ ಜಿಲ್ಲೆಯ ಹೊಸಪೇಟೆ,ಗುಲ್ಬರ್ಗ ಜಿಲ್ಲೆಯ ಸೇಡಂನಲ್ಲಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ ಎಂದರು.

ಕೆಂಗೇರಿಯ ಮರಿಯಪ್ಪನ ಪಾಳ್ಯದಲ್ಲಿ 32 ಎಕರೆ ಪ್ರದೇಶದಲ್ಲಿ ಪೂರ್ಣಿಮಾದೇವಿ ಟೆಕ್‌ಪಾರ್ಕನ್ನು 238 ಕೋಟಿ ರು. ಬಂಡವಾಳ ಹೂಡಿ ಸ್ಥಾಪಿಸಲಿದ್ದಾರೆ. ಇಲ್ಲಿ 16,268 ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಹಾಗೆಯೇ ಗೋಪಾಲನ್ ಎಂಟರ್‌ಪ್ರೈಸಸ್ 20 ಎಕರೆ ಸ್ಥಳದಲ್ಲಿ 190 ಕೋಟಿ ರು. ಬಂಡವಾಳ ಹೂಡಿ ಬಯೋಟೆಕ್ ಪಾರ್ಕ್‌ಬನ್ನ್ನು ಬೆಂಗಳೂರು ಪಶ್ಚಿಮ ವಲಯದಲ್ಲಿ ಸ್ಥಾಪಿಸಲು ಅನುಮೋದನೆ ಪಡೆದಿದೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X