ವರ್ಷದಲ್ಲಿ 27 ಸಲ ಗಡಿ ಉಲ್ಲಂಘನೆ ಮಾಡಿದ ಪಾಕ್
ಜಮ್ಮು, ಆ. 21 : ಪಾಕಿಸ್ತಾನದ ಸೈನಿಕರು ಮತ್ತೆ ನೌಶೇರ್ ಬಳಿಯ ಜನಾಗಡ ಪ್ರದೇಶದಲ್ಲಿರುವ ಗಡಿರೇಖೆ ಉಲ್ಲಂಘನೆ ಮಾಡಿರುವ ಪ್ರಕರಣ ನಡೆದಿದೆ. ಗಡಿ ಉಲ್ಲಂಘನೆ ಹಿನ್ನೆಲೆಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಆರು ಸುತ್ತಿವ ಮಾರ್ಟರ್ ಷೆಲ್ ದಾಳಿಯು ನಡೆದಿದ್ದು, ಈ ಒಂದೇ ವರ್ಷದಲ್ಲಿ ಪಾಕಿಸ್ತಾನ ಸೈನಿಕರಿಂದ 27 ಬಾರಿ ಗಡಿ ಉಲ್ಲಂಘನೆ ಪ್ರಕರಣ ಮಾಡಿದಂತಾಗಿದೆ.
ಇಂದು ಬೆಳಗಿನ ಜಾವ ರಾಜೌರಿ ಜಿಲ್ಲೆಯ ನೌಶೇರ್ ಪ್ರಾಂತ್ಯದ ಜನಾಗಡದ ಪ್ರದೇಶದ ಬಳಿ ಇರುವ ಗಡಿ ರೇಖೆಯಲ್ಲಿ ಪಾಕಿಸ್ತಾನದ ಸೈನಿಕರು ಅಕ್ರಮವಾಗಿ ಭಾರತದ ಪ್ರದೇಶದ ಒಳಗೆ ನುಸುಳುತ್ತಿರುವುದು ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಭಾರತೀಯ ಸೈನಿಕರು ಪಾಕಿಸ್ತಾನ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಉಭಯ ದೇಶಗಳ ಸೈನಿಕರ ನಡುವೆ ಕೆಲ ಹೊತ್ತಿನವರೆಗೆ ಗುಂಡಿನ ಚಕಮಕಿ ನಡೆದಿದೆ ಎಂದು ಗಡಿಭದ್ರತಾ ಇಲಾಖೆಯ ಹಿರಿಯ ಅಧಿಕಾರಿ ಎಸ್.ಡಿ.ಗೋಸ್ವಾಮಿ ತಿಳಿಸಿದ್ದಾರೆ.
ಇಂದು ನಡೆದ ಗುಂಡಿನ ಚಕಮಕಿಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ. ಪಾಕಿಸ್ತಾನದ ಸೈನಿಕರು ಅಕ್ರಮವಾಗಿ ಭಾರತದೊಳಕ್ಕೆ ನುಸುಳುತ್ತಿರುವುದು ಹೊಸದೇನಲ್ಲ. ಇದೇ ವರ್ಷದಲ್ಲಿ 27 ಸಲ ಗಡಿ ರೇಖೆ ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗಡಿರೇಖೆಯಲ್ಲಿ ಹೆಚ್ಚಿನ ಬಂದೋಬಸ್ತ್ ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಶ್ರೀನಗರ-ಮುಜಫರಬಾದ್ ಬಸ್ ಸಂಚಾರ ಆರಂಭ