ನಂದಗುಡಿಯಲ್ಲಿ ವಿಶೇಷ ಆರ್ಥಿಕ ವಲಯವಿಲ್ಲ: ಬಚ್ಚೇಗೌಡ
ಹೊಸಕೋಟೆ,ಆ.17: ಪ್ರತೀ ಕುಟುಂಬವು ತಮ್ಮದೇ ಆದ ಶೌಚಾಲಯ ಹೊಂದುವಂತೆ ಗ್ರಾಮೀಣ ಭಾಗದ ಜನತೆಯಲ್ಲಿ ಜಾಗೃತಿ ಮೂಡಿಸಲು ವ್ಯಾಪಕ ಪ್ರಚಾರ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಅವರು ತಿಳಿಸಿದರು.
ಹೊಸಕೋಟೆ
ತಾಲ್ಲೂಕಿನ
ನಂದಗುಡಿ
ಗ್ರಾಮ
ಪಂಚಾಯ್ತಿಗೆ
ಸೇರಿದ
ಬನಹಳ್ಳಿ
ಗ್ರಾಮದಲ್ಲಿ
ಶೌಚಾಲಯ
ನಿರ್ಮಿಸುವ
ಸ್ಥಳದಲ್ಲಿ
ಗುದ್ದಲಿ
ಪೂಜೆ
ನೆರವೇರಿಸಿ
ಹಾಗೂ
ನಿರ್ಮಿಸಲಾಗಿದ್ದ
ಶೌಚಾಲಯವನ್ನು
ಬಿಪಿಎಲ್
ಕುಟುಂಬಕ್ಕೆ
ಹಸ್ತಾಂತರಗೊಳಿಸುವ
ಮೂಲಕ
ಜಿಲ್ಲೆಯಲ್ಲಿ
ಸಂಪೂರ್ಣ
ಸ್ವಚ್ಛತಾ
ಆಂದೋಲನಕ್ಕೆ
ಚಾಲನೆ
ನೀಡಿದರು.
ಬೆಂಗಳೂರು
ಗ್ರಾಮಾಂತರ
ಜಿಲ್ಲೆಯ
98ಗ್ರಾಮ
ಪಂಚಾಯ್ತಿಗಳನ್ನು
ಸ್ವಚ್ಛಗ್ರಾಮಗಳನ್ನಾಗಿ
ಮಾಡುವ
ಮೂಲಕ
ನಿರ್ಮಲ
ಗ್ರಾಮ
ಪುರಸ್ಕಾರಕ್ಕಾಗಿ
ಜಿಲ್ಲೆಯನ್ನು
ಸಜ್ಜುಗೊಳಿಸುವ
ಉದ್ದೇಶ
ಹೊಂದಿರುವುದಾಗಿ
ಸಚಿವರು
ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸಿ. ಮುನಿಯಪ್ಪ ಅವರು ಮಾತನಾಡುತ್ತಾ ಪ್ರಸಕ್ತ ವರ್ಷದ ಅಂತ್ಯಕ್ಕೆ ಜಿಲ್ಲೆಯನ್ನು ಸಂಪೂರ್ಣ ಸ್ವಚ್ಛತಾ ಜಿಲ್ಲೆಯನ್ನಾಗಿ ಪರಿವರ್ತಿಸಲಾಗುವುದು ಎಂದು ಹೇಳಿದರು.
ದೇಶದಲ್ಲಿ ನಡೆಯುತ್ತಿರುವ ಸ್ವಚ್ಛತಾ ಆಂದೋಲನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಂಪೂರ್ಣ ಸ್ವಚ್ಛತೆಯನ್ನು ಸಾಧಿಸುವ ಮೂಲಕ ನೈರ್ಮಲ್ಯ ಪುರಸ್ಕಾರ ಪಡೆಯಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಮಂಜುಳಾ ಅವರು ತಿಳಿಸಿದರು.ಜಿಲ್ಲೆಯಲ್ಲಿ ನಿರ್ಮಿಸಲಾಗುತ್ತಿರುವ ಶೌಚಾಲಯಗಳಿಗೆ ಅನೇಕ ದಾನಿಗಳು ಸಲಕರಣೆಗಳನ್ನು ಒದಗಿಸುವ ಮೂಲಕ ಸ್ವಚ್ಛತಾ ಆಂದೋಲನಕ್ಕೆ ಹೆಚ್ಚಿನ ರೀತಿಯಲ್ಲಿ ನೆರವಾಗುತ್ತಿದ್ದಾರೆ ಎಂಬ ಮಾಹಿತಿಯನ್ನು ಸಚಿವರಿಗೆ ನೀಡಿದರು.
ನಂದಗುಡಿಯಲ್ಲಿ
ವಿಶೇಷ
ಆರ್ಥಿಕ
ವಲಯವಿಲ್ಲ
ನಂದುಗುಡಿಯಲ್ಲಿ
ವಿಶೇಷ
ಆರ್ಥಿಕ
ವಲಯ
ಸ್ಥಾಪಿಸಲಾಗುವುದಿಲ್ಲ.
ಈ
ಬಗ್ಗೆ
ಸಾರ್ವಜನಿಕರು
ಉಹಾಪೋಹಗಳಿಗೆ
ಕಿವಿಗೊಡಬಾರದು
ಎಂದು
ಕಾರ್ಮಿಕ
ಸಚಿವ
ಬಿ.ಎನ್.
ಬಚ್ಚೇಗೌಡ
ಅವರು
ತಿಳಿಸಿದ್ದಾರೆ.
ಇಂದು
ನಂದಗುಡಿಯಲ್ಲಿ
ಸಂಪೂರ್ಣ
ಸ್ವಚ್ಛತಾ
ಆಂದೋಲನದ
ಜಿಲ್ಲಾ
ಕಾರ್ಯಕ್ರಮ
ಉದ್ದೇಶಿ
ಮಾತನಾಡಿದ
ಅವರು
ಭೂ
ನೊಂದಾವಣಿಗೆ
ಸಂಬಂಧಿಸಿದ
ನಿರ್ಬಂಧಗಳನ್ನು
ಸಡಿಲಿಸಬೇಕೆಂದು
ಸರ್ಕಾರಕ್ಕೆ
ಸಲಹೆ
ಮಾಡುವುದಾಗಿ
ತಿಳಿಸಿದರು.
(ದಟ್ಸ್ಕನ್ನಡ ವಾರ್ತೆ)