ಹಾಲಿನ ಬೆಲೆ ಏರಿಕೆಗೆ ಸರ್ಕಾರದ ತಡೆಯಾಜ್ಞೆ!
ಬೆಂಗಳೂರು, ಆ.17:ಸೋಮವಾರದಿಂದ(ಆ.18) ಜಾರಿಗೆ ಬರುವಂತೆ ನಂದಿನಿ ಹಾಲಿನ ಮಾರಾಟ ದರವನ್ನು 2 ರು.ಏರಿಸಿರುವ ಕೆಎಂಎಫ್ ನಿರ್ಧಾರವನ್ನು ಹಿಂಪಡೆದುಕೊಳ್ಳಲು ರಾಜ್ಯ ಸರ್ಕಾರ ಸೂಚಿಸಿದೆ.
ಹಾಲಿನ ಬೆಲೆ ಏರಿಸುವುದಿಲ್ಲ ಎಂದು ಕೆಎಂಎಫ್ ಭಾನುವಾರ ಸ್ಪಷ್ಟಪಡಿಸಿದೆ. ಹಾಗಾಗಿ ಸೋಮವಾರದಿಂದ ಪ್ರತಿ ಲೀಟರ್ ಹಾಲಿಗೆ ಗ್ರಾಹಕರು ರು.2 ಹೆಚ್ಚಿಗೆ ಕೊಡಬೇಕೆ ಬೇಡವೆ ಎಂಬ ಗೊಂದಲ ನಿವಾರಣೆಯಾಗಿದೆ. ಪರಿಷ್ಕೃತ ದರಗಳ ಪ್ರಕಾರ ಡಬಲ್ ಟೋನ್ಡ್ ಹಾಲು 14ರಿಂದ 16 ರು., ಟೋನ್ಡ್ ಹಾಲು 16ರಿಂದ 18 ರು.,ಎಚ್ಸಿಎಂ ಹಾಲು 18 ರಿಂದ 20ಕ್ಕೆ ಹಾಗೂ ಫುಲ್ ಕ್ರೀಮ್ ಹಾಲು 22ರಿಂದ 24 ರು.ಗಳಿಗೆ ಏರಿಸಲು ನಿರ್ಧರಿಸಲಾಗಿತ್ತು.
ರೈತರ ಹಿತದೃಷ್ಟಿಯಿಂದ ಹಾಲಿನ ಬೆಲೆ ಏರಿಕೆ ಮಾಡುತ್ತಿರುವುದಾಗಿ ಕೆಎಂಎಫ್ ಅಧ್ಯಕ್ಷ ಎಚ್.ಡಿ.ರೇವಣ್ಣ ಹೇಳಿದ್ದರು.ಆದರೆ ಸರ್ಕಾರ ಬೆಲೆ ಏರಿಕೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ತಾಕೀತು ಮಾಡಿರುವ ಕಾರಣ ಕೆಎಂಎಫ್ ಅನುಭವಿಸುತ್ತಿರುವ ನಷ್ಟವನ್ನು ಸರ್ಕಾರವೇ ಸರಿದೂಗಿಸಬೇಕಾಗುತ್ತದೆ ಎಂದು ರೇವಣ್ಣ ಪ್ರತಿಕ್ರಿಯಿಸಿದ್ದಾರೆ.
(ದಟ್ಸ್ಕನ್ನಡ ವಾರ್ತೆ)