ರಾಜ್ಯ ಯೋಜನಾ ಗಾತ್ರಕ್ಕೆ ಕೇಂದ್ರದ ಹಸಿರು ನಿಶಾನೆ
ಬೆಂಗಳೂರು, ಆ.12: ಪ್ರಸಕ್ತ ಹಣಕಾಸು ವರ್ಷದ ರಾಜ್ಯ ಯೋಜನಾ ಗಾತ್ರವನ್ನು ರು.26,052.53 ಕೋಟಿ ರು.ಗಳಿಗೆ ನಿಗದಿಪಡಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರ ಯೋಜನಾ ಆಯೋಗಕ್ಕೆ ಸಲ್ಲಿಸಿದ ಮನವಿಯನ್ನು ಅನುಮೋದಿಸಿದೆ. ದೆಹಲಿಯಲ್ಲಿ ಮಂಗಳವಾರ ನಡೆದ ಯೋಜನಾ ಆಯೋಗದ ಸಭೆಯಲ್ಲಿ ಭಾಗವಹಿಸಿದ್ದ ಅವರು ಈ ಪ್ರಸ್ತಾವನೆಯನ್ನು ಸಲ್ಲಿಸಿದರು.
2007-08ರ ಸಾಲಿನಲ್ಲಿ ಯೋಜನಾ ಗಾತ್ರವನ್ನು ರು.18,783 ಕೋಟಿ ರು.ಗಳಿಗೆ ನಿಗದಿಪಡಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಶೇ.46ರಷ್ಟು ವೃದ್ಧಿಸಿರುವುದಾಗಿ ಪ್ರಕಟಿಸಿದರು. ಕೃಷಿ ಸಂಬಂಧಿತ ಯೋಜನೆಗಳು,ಕುಡಿಯುವ ನೀರಿನ ಸರಬರಾಜು,ವಸತಿ,ನಗರಾಭಿವೃದ್ಧಿ, ಆರೋಗ್ಯ, ಶಿಕ್ಷಣ,ಸಾರಿಗೆ ಹಾಗೂ ಸಾಮಾಜಿಕ ಭದ್ರತೆಗೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಹಣಕಾಸು ನೆರವು ನೀಡಬೇಕೆಂದು ಯಡಿಯೂರಪ್ಪ ಮನವಿ ಮಾಡಿದ್ದಾರೆ.
2006-07ನೇ ಸಾಲಿನಲ್ಲಿ ಶೇ.6.2ರಷ್ಟಿದ್ದ ವಾರ್ಷಿಕ ಆರ್ಥಿಕಾಭಿವೃದ್ಧಿ 2007-08ನೇ ಸಾಲಿನಲ್ಲಿ ಶೇ.7ರಷ್ಟು ವೃದ್ಧಿ ಸಾಧಿಸಿದೆ. 11ನೇ ಪಂಚ ವಾರ್ಷಿಕ ಯೋಜನೆಯಲ್ಲಿ ಶೇ.9ರ ಆರ್ಥಿಕ ಅಭಿವೃದ್ಧಿ ಸಾಧಿಸುವ ಗುರಿ ಹೊಂದಲಾಗಿದೆ ಎಂದರು.ಹಾಗೆಯೇ ಕೃಷಿ ಕ್ಷೇತ್ರಕ್ಕಾಗಿ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿರುವುದಾಗಿ ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ತಿಳಿಸಿದರು.ಸಭೆಯಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಉಪಸ್ಥಿತರಿದ್ದರು.
(ದಟ್ಸ್ಕನ್ನಡ
ವಾರ್ತೆ)
ದೆಹಲಿಗೆ
ಪ್ರಯಾಣ
ಬೆಳೆಸಿದ
ಮುಖ್ಯಮಂತ್ರಿಗಳು