ಮಣಿಪುರ ಮಕ್ಕಳ ಅಪರಹಣಕ್ಕೆ ವ್ಯಾಪಕ ಖಂಡನೆ
ಇಂಪಾಲ್, ಆ. 12 : ಉಗ್ರಗಾಮಿಗಳ ತಂಡವೂಂದು ಶಾಲಾ ಮಕ್ಕಳನ್ನು ಅಪಹರಿಸಿ ಒತ್ತೆಯಾಳಾಗಿರಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ. ಈ ಪ್ರಕರಣದಿಂದಾಗಿ ರಾಜ್ಯದ ಎಲ್ಲ ಶಾಲೆಗಳಲ್ಲಿ ಮಕ್ಕಳು ಭಯದ ನೆರಳಿನಲ್ಲಿ ನರಳತೊಡಗಿವೆ.
ಕಳೆದ
ಒಂದು
ತಿಂಗಳಿನಿಂದ
ರಾಜ್ಯ
ನವೋದಯ
ಶಾಲೆಗಳ
ಮಕ್ಕಳನ್ನು
ಅಪಹರಿಸುತ್ತಿರುವ
ಉಗ್ರಗಾಮಿ
ತಂಡದ
ಕೃತ್ಯದಿಂದ
ಪೋಷಕರು
ತಮ್ಮ
ಮಕ್ಕಳನ್ನು
ಶಾಲೆ
ಕಳುಹಿಸಲು
ಹಿಂಜರಿಯುತ್ತಿದ್ದಾರೆ.
ಶಾಲೆಗಳನ್ನು
ಗುರಿಯಾಗಿರಿಸಿಕೊಂಡು
ಉಗ್ರರು
ನಡೆಯುತ್ತಿರುವ
ದುಷ್ಕ್ಕತ್ಯಕ್ಕೆ
ರಾಜ್ಯದ
ಎಲ್ಲ
ಸ್ತರದ
ಜನರಿಂದಲೂ
ವ್ಯಾಪಕ
ಖಂಡನೆ
ವ್ಯಕ್ತವಾಗಿದೆ.
ಅಮಾಯಕ
ಮಕ್ಕಳನ್ನು
ಅಪಹಿರಿಸಿ
ಚಿತ್ರಹಿಂಸೆ
ನೀಡುವುದು
ಎಷ್ಟರ
ಮಟ್ಟಿಗೆ
ಸರಿ.
ಇದಕ್ಕೆ
ಪರಿಹಾರವಿಲ್ಲವೇ,
ಸರ್ಕಾರ
ಇದಕ್ಕೆ
ಸೂಕ್ತ
ಕ್ರಮ
ಕೈಗೊಳ್ಳಬೇಕು.
ಈ
ಮೂಲಕ
ಮುಗ್ಧ
ಮಕ್ಕಳು
ಎದುರಿಸುತ್ತಿರುವ
ಅಪಾಯವನ್ನು
ಬಗೆಹರಿಸಬೇಕು
ಎಂದು
ನಗರದ
ಹಿರಿಯ
ನಾಗರಿಕರ
ಒಕ್ಕೂಟ
ಆಗ್ರಹಿಸಿದೆ.
ಮುಂಜಾಗ್ರತಾ ಕ್ರಮವಾಗಿ ರಾಜ್ಯ ಶಾಲೆಗಳಿಗೆ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಶಾಲೆ ಭೇಟಿ ಹಾಗೂ ಶಾಲೆ ಸುತ್ತಮುತ್ತ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿರುವ ವ್ಯಕ್ತಿಗಳ ಬಗ್ಗೆ ತೀವ್ರ ನಿಗಾ ಇರಿಸಲಾಗಿದೆ. ಕಳೆದ ತಿಂಗಳ ನವೋದಯ ಶಾಲೆ 6 ಮಕ್ಕಳನ್ನು ಉಗ್ರಗಾಮಿಗಳು ಅಪಹರಿಸಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಇಂಥ ಕೃತ್ಯಗಳನ್ನು ಮತ್ತೆ ಎಸಗಲು ಉಗ್ರರು ಸಂಚು ರೂಪಿಸಿರುವ ಹಿನ್ನೆಲೆಯಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)